Advertisement

ಸಂಗಮ್‌ ಟಾಕೀಸ್‌ನಲ್ಲಿ ಘರ್ಜಿಸಿದ ಹೆಬ್ಬುಲಿ

12:20 PM Mar 10, 2017 | Team Udayavani |

ಮೈಸೂರು: ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೆಬ್ಬುಲಿ ಚಿತ್ರದ ಪ್ರಮೋಷನ್‌ಗಾಗಿ ನಟ ಸುದೀಪ್‌ ಗುರುವಾರ ನಗರದ ಸಂಗಮ್‌ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಹೆಬ್ಬುಲಿ ಚಿತ್ರದ ಪ್ರಮೋಷನ್‌ಗಾಗಿ ರಾಜಾದ್ಯಂತ ಪ್ರವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿದ ಕಿಚ್ಚ ಸುದೀಪ್‌ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

Advertisement

ತಮ್ಮ ನೆಚ್ಚಿನ ನಟನನ್ನು ನೋಡುವ ಸಲುವಾಗಿ ಚಿತ್ರಮಂದಿರದಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಸುದೀಪ್‌ ಅಭಿಮಾನಿಗಳು ಜೈಕಾರ ಹಾಕಿ, ಪಟಾಕಿ ಸಿಡಿಸಿ ಹಷೊìàದ್ಗಾರ ವ್ಯಕ್ತಪಡಿಸಿದರು. ಇನ್ನು ತಮ್ಮ ಬರುವಿಕೆಯನ್ನು ಎದುರು ನೋಡುತ್ತಿದ್ದ ಅಭಿಮಾನಿಗಳನ್ನು ಕಂಡ ಸುದೀಪ್‌, ನೆರೆದಿದ್ದ ಸಾವಿರಾರು ಅಭಿಮಾನಿಗಳತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ನಟ ಕಿಚ್ಚ ಸುದೀಪ್‌ ಅವರನ್ನು ನೋಡಲು ನೂರಾರು ಅಭಿಮಾನಿಗಳು ಮುಗಿಬಿದ್ದ ಸಂದರ್ಭದಲ್ಲಿ ಬಾರೀ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಕೈ ಮುಗಿದ ಸುದೀಪ್‌: ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ ಕಿಚ್ಚ ಸುದೀಪ್‌, ಹೆಬ್ಬುಲಿ ಚಿತ್ರದ ಮೇಲೆ ನಾವು ನಂಬಿಕೆ ಇಟ್ಟಿದ್ದೆವು.

ಅದೇ ರೀತಿ ಜನರು ಸಹ ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಮುಂದಿನ ದಿನದಲ್ಲಿ ಯೋಧರ ಕುರಿತು ಚಿತ್ರ ಮಾಡುವ ಚಿಂತನೆ ಇದೆ ಎಂದು ಹೆಬ್ಬುಲಿ ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು. ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರ ಟ್ವಿಟ್‌ಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸದೆ ಕೈ ಮುಗಿದು ವಾಪಸ್ಸಾದರು.

Advertisement

Udayavani is now on Telegram. Click here to join our channel and stay updated with the latest news.

Next