Advertisement

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

07:53 PM May 02, 2024 | Team Udayavani |

ಗಂಗಾವತಿ :ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತ ಬೇಕು ಮತ್ತು ದಲಿತರ ಹೆಸರಿನಲ್ಲಿ ರೂಪಿಸಿದ ಯೋಜನೆಗಳನ್ನು ಅನ್ಯ ಯೋಜನೆಗೆ ಬಳಸುವ ಮೂಲಕ ದಲಿತ ಸಮಾಜವನ್ನು ಇನ್ನಷ್ಟು ಹಿಂದುಳಿಯುವಂತೆ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಗೆ ಬುದ್ದಿ ಕಲಿಸಲು ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಎಲ್ಲಾ ದಲಿತರು ಮತ ನೀಡುವ ಮೂಲಕ ಮತ್ತೊಮ್ಮೆ ಮೋದಿ ಅವರು ಪ್ರಧಾನ ಮಂತ್ರಿಯಾಗಲು ನೆರವಾಗುವಂತೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮನವಿ ಮಾಡಿದರು.

Advertisement

ನಗರದ ಗಾಂಧಿನಗರ,ಅಂಬೇಡ್ಕರ್ ನಗರ, ಹಿರೇ ಜಂತಕಲ್ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ವೇತನ ಮತ್ತು ದಲಿತ ಸಮಾಜಕ್ಕೆ ಮೀಸಲಿಟ್ಟಿದ್ದ 11000 ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯ ಸರ್ಕಾರ ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ. ಇದರಿಂದ ದಲಿತರು ಸಮಾಜದ ಮಕ್ಕಳು ಮತ್ತು ರೈತರಿಗೆ ಬಹಳ ಅನ್ಯಾಯವಾಗಿದೆ. ದಲಿತರ ಹೆಸರಿನಲ್ಲಿ ಮತ ಪಡೆಯುತ್ತಾರೆ.ಅಧಿಕಾರಕ್ಕೆ ಬಂದ ನಂತರ ದಲಿತರನ್ನು ಕಡೆಗಣಿಸುತ್ತಾರೆ. ಪ್ರಧಾನ ಮಂತ್ರಿ ಮೋದಿಯವರು ದಲಿತ ಸಮಾಜ ಸೇರಿದಂತೆ ಒಬಿಸಿ ಸಮಾಜಕ್ಕೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಆದ್ದರಿಂದ ಮತ್ತೊಮ್ಮೆ ವಿಶ್ವ ಮೆಚ್ಚಿದ ನಾಯಕ ಮೋದಿ ಅವರು ಪ್ರಧಾನಮಂತ್ರಿಯಾಗಲು ಎಲ್ಲಾ ಸಮಾಜದವರು ಆಶೀರ್ವಾದ ಮಾಡಬೇಕು ಎಂದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ದಲಿತರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಜನರಿಗೆ ಮೋಸ ಮಾಡುತ್ತಿದೆ. ದಲಿತರು,ಓಬಿಸಿಗಳನ್ನು ಮುಖ್ಯವಾಹಿನಿಗೆ ತರಲು ಬಿಜೆಪಿ ಸರ್ಕಾರದ ಹಲವು ಯೋಜನೆಗಳ ರೂಪಿಸಿತ್ತು ಕಾಂಗ್ರೆಸ್ ಈಗ ರದ್ದು ಮಾಡಿತು.ಗಂಗಾವತಿಯಲ್ಲಿ ದಲಿತ ಸಮಾಜ ಸೇರಿದಂತೆ ಮನೆ ಇರದೆ ಇರುವ ಸಮಾಜದವರಿಗೆ 10,000 ಮನೆಗಳನ್ನು ಕೇಂದ್ರ ಸರ್ಕಾರದಿಂದ ಪಡೆದು ಅವುಗಳನ್ನು ನಿರ್ಮಿಸಲಾಗುತ್ತದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ನನ್ನ ವಿರುದ್ಧ ಮಾಡುತ್ತಿರುವ ಆರೋಪ ಹೊಟ್ಟೆ ಕಿಚ್ಚಿನಿಂದ ಕೂಡಿದೆ ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ ಕ್ಷೇತ್ರದ ಜನರು ನನ್ನ ಅಭಿವೃದ್ಧಿಯನ್ನು ಕಂಡು ಗಂಗಾವತಿಯಲ್ಲಿ ಗೆಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಗಂಗಾವತಿಯನ್ನು ಮಾದರಿಯ ನಗರ ಮಾಡಲಾಗುತ್ತದೆ.ಅಂಜನಾದ್ರಿ ಬೆಟ್ಟ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ಅವಧಿಪಡಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮನವಳ್ಳಿ, ಬಿಜೆಪಿ ಮುಖಂಡರಾದ ಹುಸೇನಪ್ಪ ಮಾದಿಗ, ಶಿವಪ್ಪ ಮಾದಿಗ, ಬಸವರಾಜ್ ಕಟ್ಟಿಮನಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next