Advertisement

ಕ್ವಾರಂಟೈನ್‌ನಲ್ಲಿದ್ದ ಜನರ ಆರೋಗ್ಯ ತಪಾಸಣೆ

05:20 PM May 29, 2020 | Naveen |

ಸಂಡೂರು: ವಲಸಿಗರು ಮತ್ತು ವಿವಿಧ ಕಡೆಗಳಿಂದ ಬಂದ ಕಾರ್ಮಿಕರನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಂಡ್ರಿಯಲ್ಲಿ 114 ಜನರನ್ನು ಕ್ವಾರಂಟೈನಲ್ಲಿಟ್ಟಿದ್ದು ಅವರಿಗೆ ಆರೋಗ್ಯ ತಪಾಸಣೆ ಬಗ್ಗೆ ತಾಲೂಕು ಆರೋಗ್ಯ ಇಲಾಖೆ ಮತ್ತು ಕೋವಿಡ್ ತಂಡ ಪರಿಶೀಲನೆ ನಡೆಸಿತು.

Advertisement

ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್‌.ಕೆ. ವೆಂಕಟೇಶ್‌ ಮಾಹಿತಿ ನೀಡಿ ಕ್ವಾರಂಟೈನ್‌ನಲ್ಲಿರುವ ಎಲ್ಲ 114 ಜನರನ್ನು ಪೂರ್ಣ ಪ್ರಮಾಣದಲ್ಲಿ ಸ್ಕ್ರೀನಿಂಗ್‌ ಮಾಡಿ ಅವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ತಿಳಿಸಲಾಗಿದೆ. ಪ್ರಮುಖವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈತೊಳೆಯುವುದು, ಶುಚಿತ್ವ ಕಾಪಾಡುವುದು ಅತಿ ಅಗತ್ಯವಾಗಿದೆ ಎಂದರು.

ತಂಡದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರಸನ್ನಕುಮಾರ್‌, ಬಸವರಾಜ, ವ್ಯವಸ್ಥಾಪಕ ಗಂಗಣ್ಣ ಇತರ ಎಲ್ಲರೂ ಸಹ ಸೂಕ್ತವಾದ ಆಹಾರ, ಮೂಲಸೌಲಭ್ಯಗಳನ್ನು ಸಹ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next