Advertisement

ಹೆದ್ದಾರಿ ಮೇಲೆ ಮರಳು : ಅಪಘಾತ ಭೀತಿ

03:00 PM Mar 18, 2017 | Team Udayavani |

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ತುಂಬೆ ಮತ್ತು ಕಳ್ಳಿಗೆ ಗ್ರಾಮದ ನಡುವೆ ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಸನಿಹ ಲಾರಿಯಿಂದ ರಸ್ತೆಗೆ ಮರಳು ಸೋರಿಕೆಯಾಗಿರುವ ಘಟನೆ ಮಾ. 15ರಂದು ರಾತ್ರಿ ನಡೆದಿದೆ. ಇದರಿಂದ ಲಘು ಮತ್ತು ದ್ವಿಚಕ್ರ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ಅಪಘಾತದ ಭೀತಿ ಉಂಟಾಗಿದೆ.

Advertisement

ಮರಳಿನ ಮೇಲೆ ವಾಹನಗಳು ಚಲಿಸುವಾಗ ನಿಯಂತ್ರಣ ತಪ್ಪಿ ಅನಾಹುತಗಳ ಅಪಾಯ ಉಂಟಾಗಿದೆ. ತುಂಬೆ ರಾಮಲ್‌ಕಟ್ಟೆಯಿಂದ ಅಲ್ಲಲ್ಲಿ ಮರಳು ರಸ್ತೆಯ ಮೇಲೆ ಚೆಲ್ಲಿಕೊಂಡಿದ್ದು ಸಂಚಾರಕ್ಕೆ ಅಡಚಣೆ ಆಗಿದೆ. ಮರಳು ಸಾಗಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಮರಳು ಸೋರಿಕೆಯಾಗಿದೆ. ಮರಳು ತುಂಬಿಸುವಲ್ಲಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ವಾಹನ ಸವಾರರು, ಸಾರ್ವಜನಿಕರು ದೂರಿದ್ದಾರೆ.

ಅಕ್ರಮಗಳಿಗೆ ಪ್ರೋತ್ಸಾಹ
ಮರಳು ಸಾಗಾಟ ಮಾಡುವವರಿಗೆ ಕಾನೂನು ಬಾಹಿರವಾಗಿ ಪರವಾನಿಗೆ ನೀಡುತ್ತಿರುವುದು, ಒಂದು ವೇಳೆ ಸಮರ್ಪಕವಾಗಿ ಪರವಾನಿಗೆ ನೀಡಿದ್ದರೂ ಅನಂತರ ಅದರ ಬಗ್ಗೆ ಪರಿಶೀಲನೆ ಮಾಡದಿರುವುದು, ಸಾಗಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ತಪಾಸಣೆ ನಡೆಸದಿರುವುದು ಮೊದಲಾದ ಕಾರಣಗಳಿಂದಾಗಿ ಹಲವಾರು ಮರಳು ಸಾಗಾಟ ಲಾರಿಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿವೆ. ಇದಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ
ಮರಳು ಸೋರಿಕೆಯಿಂದ ಆಗುವ ಅನಾಹುತದ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಅನೇಕ ಅನಾಹುತಕ್ಕೆ ಕಾರಣವಾಗಿದೆ.

ರಾತ್ರಿ ಹಗಲೆನ್ನದೆ ರಾಜ್ಯ, ಅಂತರ್‌ರಾಜ್ಯಮರಳು ಸಾಗಾಟದ ಸಂದರ್ಭ ರಸ್ತೆಯಲ್ಲಿ ಸೋರಿಕೆ ಆಗುವ ಮರಳು ದ್ವಿಚಕ್ರ ಸವಾರರನ್ನು ಕಂಗೆಡಿಸುತ್ತಿದೆ. ಜಿಲ್ಲೆಯಲ್ಲಿ ಪ್ರಮುಖ ಸೇತುವೆಯ ಇಕ್ಕೆಲಗಳ ರಸ್ತೆಯಲ್ಲಿ ಬೀಳುವ ಮರಳನ್ನು ಹೊರಚೆಲ್ಲುವ ವ್ಯವಸ್ಥೆಯನ್ನು ರಾ.ಹೆ.ಇಲಾಖೆ ಮಾಡುತ್ತದೆ. ಆದರೆ ಹೆದ್ದಾರಿಯಲ್ಲಿ ಬಿದ್ದಂತಹ ಮರಳನ್ನು ತೆಗೆದು ರಸ್ತೆ ಸ್ವತ್ಛ ಮಾಡುವ ವ್ಯವಸ್ಥೆ ಹೆದ್ದಾರಿ ಇಲಾಖೆಯಲ್ಲಿ ಇಲ್ಲವಾಗಿದೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next