Advertisement

ಉಳ್ಳಾಲ ಪೊಲೀಸರ ಭಾರಿ ಬೇಟೆ:ಬೃಹತ್‌ ಅಕ್ರಮ ಮರಳು ಜಾಲ ಬಯಲು

02:57 PM Oct 24, 2018 | Team Udayavani |

ಉಳ್ಳಾಲ: ಬೃಹತ್‌ ಅಕ್ರಮ ಮರಳುಗಾರಿಕೆ ಜಾಲವನ್ನು ಉಳ್ಳಾಲ ಪೊಲೀಸರು ಬುಧವಾರ ಬೇಧಿಸಿದ್ದು, ಮರಳು ಅಡ್ಡೆಗೆ ದಿಢೀರ್ ದಾಳಿ ನಡೆಸಿ ದೋಣಿಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಮರಳನ್ನು ಜಪ್ತಿ ಮಾಡಿದ್ದಾರೆ. 

Advertisement

ಸೋಮೇಶ್ವರ ಉಚ್ಚಿಲ ಅಳಿವೆಬಾಗಿಲು ಕಡೆಯಿಂದ ತಲಪಾಡಿ ಸಸಿಹಿತ್ಲು ಭಾಗದಲ್ಲಿ ಸುಮಾರು ಮೂರು ಕಡೆ ಮರಳನ್ನು ದೋಣಿಗಳಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿತ್ತು.  ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು, ಕೆಎಸ್‌ಆರ್‌ಪಿ ತುಕಡಿ ಜೊತೆಗೆ ಬೆಳಗ್ಗೆ 9 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. 

ದಾಳಿ ವೇಳೆಗೆ 16 ದೋಣಿಗಳು ಮತ್ತು 30 ಲೋಡ್ ಮರಳನ್ನು ವಶಪಡಿಸಲಾಗಿದೆ. ಉಳ್ಳಾಲ ಪೊಲೀಸರು ಮತ್ತು ಕೆಎಸ್‌ಆರ್‌ಪಿ ದಳದ ಪೊಲೀಸರು ಸ್ವತಃ ನಾವಿಕರಾಗಿ ನದಿಯಿಂದ ದೋಣಿಗಳನ್ನು ದಡಕ್ಕೆ ತರಬೇಕಾಯಿತು. ನಂತರ ಜೆಸಿಬಿ ಮೂಲಕ ದೋಣಿಗಳನ್ನು ಮೇಲೆತ್ತಲಾಯಿತು.  ಈ ಜಾಗ ಯಾರಿಗೆ ಸೇರಿದ್ದು, ಈ ಮರಳು ಅಡ್ಡೆಯ
ಮಾಲೀಕರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಸ್ಥಳಕ್ಕೆ ಬಾರದ ಭೂ ವಿಜ್ಞಾನ ಅಧಿಕಾರಿಗಳು: ಅಕ್ರಮ ಮರಳು ಅಡ್ಡೆ ದಾಳಿಯ ಮಾಹಿತಿ ಇದ್ದರೂ ಮಧ್ಯಾಹ್ನವಾದರೂ ಯಾವುದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಇರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ. 

Advertisement

ಉಳ್ಳಾಲ ಠಾಣೆ ಇನ್ಸ್ಪೆಕ್ಟರ್ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸಬ್ ಇನ್ಸ್ಪೆಕ್ಟರ್ ಗಳಾದ ಗುರ‍್ರಪ್ಪ ಮತ್ತು ವಿನಾಯಕ್ ಮತ್ತು ಮೀಸಲು ಪಡೆಯ ಪೊಲೀಸ್ ಇನ್ಸ್ಪೆಕ್ಟರ್ ವೈ. ಕೇಶವ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next