Advertisement

ಉಡುಪಿ ಅಕ್ರಮ ಮರಳುಗಾರಿಕೆ ಬಹುಕೋಟಿ ಹಗರಣ ತನಿಖೆಗೆ ಕಾಂಗ್ರೆಸ್ ಆಗ್ರಹ

01:36 PM May 27, 2020 | sudhir |

ಉಡುಪಿ: ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಗೆ ನಡೆಯುತ್ತಿದ್ದು, ಬಹುಕೋಟಿ ಹಗರಣ ನಡೆದಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

Advertisement

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ ಅಮೀನ್ ಪಡುಕರೆ ಮರಳುಗಾರಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಗ ಕಾನೂನು ಕಟ್ಟಲೆಗಳನ್ನು ಮೀರಿ ಗುತ್ತಿಗೆ ನೀಡಲಾಗಿದೆ.

ಕೋವಿಡ್ ವೈರಸ್ ದುರ್ಲಾಭ ಮಾಡಿಕೊಂಡು ಭಾರಿ ಅಕ್ರಮಕ್ಕೆ ಅವಕಾಶ ನೀಡಲಾಗಿದೆ.ಅಕ್ರಮ‌ ಮರಳುಗಾರಿಕೆ ಕುರಿತು ಲೋಕಯುಕ್ತಕ್ಕೂ ದೂರು ನೀಡಲಾಗಿದ್ದು.ಸೂಕ್ತ‌ರೀತಿಯಲ್ಲಿ ತನಿಖೆ ನಡೆದು ಅಕ್ರಮದ ಪೂರ್ಣ ಚಿತ್ರಣ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಅಕ್ರಮಕ್ಕೆ ಸಂಬಂಧಿಸಿ ಕೆಲ ದಾಖಲೆಗಳಿರುವ ಪೆನ್ ಡ್ರೈವ್ ಬಿಡುಗಡೆಗೊಳಿಸಿದರು. ನಗರ ಸಭೆ ಸದಸ್ಯ ರಮೇಶ್ ಕಾಂಚನ್. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಭಂಡಾರ್ ಕಾರ್.ಪ್ರಶಾಂತ ಪೂಜಾರಿ. ವಿಜಯ ಕುಮಾರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next