Advertisement

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ದತ್ತಾತ್ರೇಯರ ಆರ್ಶೀವಾದದ ಮರಳು

02:21 PM Jul 28, 2020 | keerthan |

ಚಿಕ್ಕಮಗಳೂರು: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ ಮೊದಲ ವಾರದಲ್ಲಿ ಭೂಮಿ ಪೂಜೆ ನಡೆಯಲಿದ್ದು, ಈ ಕಾರ್ಯಕ್ಕೆ ಚಿಕ್ಕಮಗಳೂರು ಗೌರಿಗದ್ದೆಯಿಂದ ದತ್ತಾತ್ರೇಯರ ಆರ್ಶೀವಾದದ ಮರಳನ್ನು ಕಳುಹಿಸಿಕೊಡಲಾಯಿತು.

Advertisement

ಗೌರಿಗದ್ದೆಯ ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೊಜೆ ಮಾಡಿದ ವಿನಯ್ ಗೂರೂಜಿಯವರು ಬಿಕ್ಷೆ ಪಾತ್ರೆಗೆ ಮರಳು ಹಾಕಿ ಅಯೋಧ್ಯೆಗೆ ಕಳುಹಿಸಿಕೊಟ್ಟರು.

ಪವಿತ್ರ ಮರಳನ್ನು ಬಜರಂಗದಳದ ಪ್ರಮುಖ ಕಾರ್ಕಳ ಸುನೀಲ್.ಕೆ ಮೂಲಕ ಅಯೋಧ್ಯೆಗೆ ಕಳುಹಿಸಿ ಕೊಡಲಾಯಿತು.

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ದೇಶದ 18 ದತ್ತ ಕ್ಷೇತ್ರದ ಮಣ್ಣು ತರುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ. ಕಲಿಯುಗದ 19ನೇ ದತ್ತ ಕ್ಷೇತ್ರ ಗೌರಿಗದ್ದೆಯ ಸ್ವರ್ಣ ಪೀಠೀಕ ಪುರದಿಂದಲೂ ಮಣ್ಣು ತಲುಪಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next