Advertisement

ಪುಸ್ತಕ ರೂಪದಲ್ಲಿ ಸಂಚಾರಿ ವಿಜಯ್‌ ಜೀವನ ಕಥನ

08:41 AM Jul 15, 2021 | Team Udayavani |

ಇತ್ತೀಚೆಗಷ್ಟೇ ಅಪಘಾತದಲ್ಲಿ ನಿಧನ ಹೊಂದಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಕುರಿತಾಗಿ ಪುಸ್ತಕವೊಂದು ಹೊರ ಬರುತ್ತಿದೆ.’

Advertisement

ಅನಂತವಾಗಿರು’ ಎಂಬ ಈ ಪುಸ್ತಕವನ್ನು ಪತ್ರಕರ್ತ ಶರಣು ಹುಲ್ಲೂರು ಹೊರತರುತ್ತಿದ್ದಾರೆ. ಜುಲೈ17 ಸಂಚಾರಿ ವಿಜಯ್‌ ಹುಟ್ಟುಹಬ್ಬ. ಅಂದು ಈ ಪುಸ್ತಕ ಬಿಡುಗಡೆಯಾಗುತ್ತಿದೆ.

ಇದೊಂದು ಬಯೋಗ್ರಫಿ ಮಾದರಿಯಲ್ಲೇ ರೂಪಗೊಂಡ ಪುಸ್ತಕ. ವಿಜಯ್‌ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್‌ ಸಹೋದರರು ಮತ್ತುಕುಟುಂಬ ಮಾತನಾಡಿದ್ದರೆ, ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿ ಕೊಂಡಿದ್ದಾರೆ.

ಇದನ್ನೂ ಓದಿ:ಪತ್ರಕರ್ತೆಯಾದ ಹರಿಪ್ರಿಯಾ!: ಮತ್ತೆ ಶೂಟಿಂಗ್‌ನಲ್ಲಿ ಬಿಝಿ ಹುಡುಗಿ

ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್‌ ಅವರು ಸಾಗಿ ಬಂದ ನಾನಾಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿನಕಾಯಕ ಪ್ರಕಾಶನದಿಂದ ಈ ಕೃತಿ ಹೊರಬರುತ್ತಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next