Advertisement

Sai Baba Idol: ವಾರಾಣಸಿಯ ದೇವಸ್ಥಾನಗಳಿಂದ ಸಾಯಿಬಾಬಾ ವಿಗ್ರಹ ತೆರವು

10:36 PM Oct 02, 2024 | Team Udayavani |

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ದೇವಸ್ಥಾನಗಳಲ್ಲಿ ಸಾಯಿಬಾಬಾ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ವಿಚಾರ ಈಗ ವಿವಾದವೆಬ್ಬಿಸಿದೆ. ಬಡಾ ಗಣೇಶ ಮಂದಿರ ಸೇರಿ 14 ದೇವಸ್ಥಾನಗಳಲ್ಲಿ ಸಾಯಿಬಾಬಾ ವಿಗ್ರಹಗಳನ್ನು ತೆಗೆಸಲಾಗಿದ್ದು, ಇನ್ನೂ 28 ದೇವಸ್ಥಾನಗಳನ್ನು ಹಿಂದೂ ಸಂಘಟನೆಗಳು ಗುರಿಯಾಗಿಸಿಕೊಂಡಿವೆ.

Advertisement

ಸನಾತನ ರಕ್ಷಕ ಸೇನೆ ಈ ವಿಚಾರವಾಗಿ ಭಾರಿ ವಿರೋಧ ಮಾಡುತ್ತಿದೆ ಎಂದು ವರದಿಯಾಗಿದೆ. ಸಾಯಿಬಾಬಾ ಮುಸ್ಲಿಂ ಆಗಿದ್ದು, ಸನಾತನ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಹಿಂದೂ ಸಂಘಟನೆಗಳ ವಾದವಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇನ್ನೂ 28 ದೇವಾಲಯಗಳನ್ನು ಗುರಿಯಾಗಿಸಿಕೊಂಡಿವೆ. ಸಾಯಿಬಾಬಾ ಪೂಜೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ದೇವಸ್ಥಾನಗಳಲಿ ಅವರ ವಿಗ್ರಹ ಇಡಲು ನಾವು ಬಿಡುವುದಿಲ್ಲ ಎಂದು ಸಂಘಟನೆಗಳು ಪಟ್ಟು ಹಿಡಿದಿವೆ.

 

Advertisement

Udayavani is now on Telegram. Click here to join our channel and stay updated with the latest news.

Next