Advertisement

“ಕನ್ನಡ ಕಣ್ಮಣಿ’ಗೆದ್ದ ಉಡುಪಿಯ ಸಂಹಿತಾ

09:52 AM Jun 17, 2019 | Team Udayavani |

ಉಡುಪಿ: ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ “ಕನ್ನಡ ಕಣ್ಮಣಿ’ಯ ಅಂತಿಮ ಸುತ್ತಿನಲ್ಲಿ ಉಡುಪಿಯ ಸಂಹಿತಾ ಜಿ.ಪಿ. “ಕನ್ನಡ ಕಣ್ಮಣಿ’ ಕಿರೀಟ ಧರಿಸಿ ಪ್ರಥಮ ಸ್ಥಾನಿಯಾಗಿದ್ದಾಳೆ. ಶನಿವಾರ ನಡೆದ ಅಂತಿಮ ಸ್ಪರ್ಧೆಯಲ್ಲಿ ಈಕೆ 2 ಲ.ರೂ. ಬಹುಮಾನದೊಂದಿಗೆ ಟ್ರೋಫಿ ಗೆದ್ದಳು.

Advertisement

ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇತರಗತಿ ಓದುತ್ತಿರುವ, ಪರ್ಕಳದ ನಿವಾಸಿ ಈಕೆ ಕನ್ನಡದಲ್ಲಿ ಅರಳು ಹುರಿದಂತೆ ಮಾತಾಡಿ ತೀರ್ಪುಗಾರರ ಮನಸೆಳೆದಳು. ಈಕೆ ಶಿಕ್ಷಕ ಜಿ.ಪಿ. ಪ್ರಭಾಕರ ತುಮರಿ ಮತ್ತು ಮಣಿಪಾಲ ವಿ.ವಿ. ಉದ್ಯೋಗಿ ಕಲ್ಪನಾ ಪಿ. ದಂಪತಿಯ ಪುತ್ರಿ.

“ಕನ್ನಡ ಕಣ್ಮಣಿ’ಯಲ್ಲಿ ರಾಜ್ಯದ 32 ಕೇಂದ್ರಗಳಿಂದ ಸುಮಾರು 30 ಸಾವಿರ ಮಕ್ಕಳಿಗೆ ಆಡಿಷನ್‌ ನಡೆಸಲಾಗಿತ್ತು. ಫೆಬ್ರವರಿಯಲ್ಲಿ ಆರಂಭಗೊಂಡ ಕಾರ್ಯಕ್ರಮ ಈಗ ಸಮಾಪ್ತಿಗೊಂಡಿದೆ. ತೀರ್ಪುಗಾರರಾಗಿ ನಟ ಜಗ್ಗೇಶ್‌, ಕವಿ ಜಯಂತ ಕಾಯ್ಕಿಣಿ, ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ ಭಾಗವಹಿಸಿದ್ದರು. ಬಿಗ್‌ಬಾಸ್‌ ಖ್ಯಾತಿಯ ಕಿರಿಕ್‌ ಕೀರ್ತಿ ಕಾರ್ಯಕ್ರಮದ ನಿರೂಪಕರು.

Advertisement

Udayavani is now on Telegram. Click here to join our channel and stay updated with the latest news.

Next