Advertisement

Ullal ಸಮೀರ್‌ ಹತ್ಯೆ ಪ್ರಕರಣ: ನಾಲ್ವರ ಬಂಧನ

12:02 AM Aug 15, 2024 | Team Udayavani |

ಉಳ್ಳಾಲ: ಕಲ್ಲಾಪುನಲ್ಲಿ ನಡೆದ ರೌಡಿಶೀಟರ್‌ ಕಡಪ್ಪರ ಸಮೀರ್‌ ಹತ್ಯೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಇನ್ನೋರ್ವನಿಗಾಗಿ ಶೋಧ ಚುರುಕುಗೊಳಿಸಿದ್ದಾರೆ.

Advertisement

ಕಾಟಿಪಳ್ಳ ನಿವಾಸಿ ಮೊಹಮ್ಮದ್‌ ನೌಷಾದ್‌ (26), ನಾಟೆಕಲ್‌ ಸಂಕೇಶ ನಿವಾಸಿ ನಿಯಾಝ್ (23), ಬಜಾಲ್‌ ಶಾಂತಿನಗರದ ತನ್ವೀರ್‌ ಯಾನೆ ತನ್ನು (27), ಕಾಪು ಮಲಾರ್‌ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ (28) ಬಂಧಿತರು.

ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ತಲವಾರು ದಾಳಿ ಸಂದರ್ಭದಲ್ಲಿ ಆತ ಗಾಯ ಗೊಂಡಿರುವ ಶಂಕೆಯಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟಾರ್ಗೆಟ್‌ ಇಲ್ಯಾಸ್‌ ಹತ್ಯೆ ಸಂದರ್ಭದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಇಲ್ಯಾಸ್‌ ಪತ್ನಿಯ ಸಹೋದರ ಮೊಹಮ್ಮದ್‌ ನೌಷದ್‌ ಕೊಲೆಯ ರೂವಾರಿ.

ಈತನ ವಿರುದ್ಧ ಈ ಹಿಂದೆ ಅಪಹರಣ, ಎನ್‌ಡಿಪಿಎಸ್‌ ಕಾಯ್ದೆ ಉಲ್ಲಂಘನೆ, ಸುರತ್ಕಲ್‌ ಮತ್ತು ಸಕಲೇಶಪುರ ಠಾಣೆಗಳಲ್ಲಿ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಿವೆ. ತನ್ವೀರ್‌ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಜಾನುವಾರು ಕಳ್ಳತನ ಮತ್ತು ದರೋಡೆ ಯತ್ನ ಪ್ರಕರಣಗಳನ್ನು ದಾಖಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next