Advertisement

Karnataka Politics: ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಕರೆ ಮಾಡಿದ್ದರು; ಈಶ್ವರಪ್ಪ

08:12 PM Mar 30, 2024 | Team Udayavani |

ಶಿವಮೊಗ್ಗ: ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ.  “ಕಾಲ್‌ ಮಿ ಅರ್ಜೆಂಟ್‌’ ಅಂತ ಮೆಸೇಜ್‌ ಮಾಡಿದ್ದರು. ನಾನು ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಅವರ ಪಕ್ಷದಿಂದ ಟಿಕೆಟ್‌ ನೀಡಲು ಕರೆ ಮಾಡಿರಬಹುದು. ಆದರೆ ನಾನು ಹಿಂದುತ್ವವನ್ನು ನನ್ನ ತಾಯಿ ಅಂದುಕೊಂಡವನು. ಅದಕ್ಕೆ ಯಾವತ್ತೂ  ಮೋಸ ಮಾಡುವುದಿಲ್ಲ. ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದರು. ಈಗ ಕಾಂಗ್ರೆಸ್‌ನಿಂದ ಡಮ್ಮಿ, ದುರ್ಬಲ ಅಭ್ಯರ್ಥಿಯನ್ನು ಹಾಕಿಸಿಕೊಂಡು ಬಂದಿದ್ದಾರೆ. ಇಂತಹ ನೀತಿಗೆಟ್ಟ ರಾಜಕಾರಣವನ್ನು ನಾನೆಂದೂ ಮಾಡಿಲ್ಲ. ಶಿಕಾರಿಪುರದಲ್ಲಿ ಹಂಚಿರುವಷ್ಟು ಹಣ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಹಂಚಿಲ್ಲ. ಆದರೂ ಸಿಕ್ಕಿದ್ದು 10 ಸಾವಿರ ಮುನ್ನಡೆ ಮಾತ್ರ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next