Advertisement

‘ಎನ್‌ಡಿಎಗೆ ಈ ಬಾರಿ ಪಿಡಿಎನಿಂದ ಸೋಲು’: ಅಖಿಲೇಶ್‌ ಯಾದವ್‌

12:35 AM Apr 18, 2024 | Team Udayavani |

ಘಾಜಿಯಾಬಾದ್‌: ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಬಾರಿ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖಾಕ) ಸಮುದಾಯದಿಂದ ಸೋಲು ಉಂಟಾಗಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಮೋದಿ ಸರಕಾರದಿಂದ ಈ ಸಮುದಾಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ಅವರು ದೂರಿದ್ದಾರೆ.

Advertisement

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಜತೆಗೆ ಘಾಜಿ ಯಾಬಾದ್‌ನಲ್ಲಿ ಮಾತನಾಡಿದ ಅವರು, 15-20 ದಿನಗಳ ಹಿಂದೆ ಎನ್‌ಡಿಎಗೆ 180 ಸ್ಥಾನ ಬರುವ ನಿರೀಕ್ಷೆ ಹೊಂದಿದ್ದೆ. ಆದರೆ ಈಗ 150 ದಾಟುವುದೂ ಕಷ್ಟ ಎಂದು ಅನಿಸುತ್ತಿದೆ ಎಂದರು. ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮೈತ್ರಿಕೂಟವೇ ಜಯ ಸಾಧಿಸಿ, ಬಿಜೆಪಿ ಹಿನ್ನಡೆ ಉಂಟು ಮಾಡಲಿದ್ದೇವೆ ಎಂದು ಅಖೀಲೇಶ್‌ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದ ಮತದಾನಕ್ಕೆ 2 ದಿನಗಳು ಇರುವಂತೆಯೇ ರಾಹುಲ್‌ ಗಾಂಧಿ ಮತ್ತು ಅಖೀಲೇಶ್‌ ಯಾದವ್‌ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ್ದು ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next