Advertisement

ಅಕ್ರಮಗಳ ಕಡಿವಾಣಕ್ಕೆ ಸಮಾಧಾನ್‌ ಅಪ್ಲಿಕೇಷನ್‌

07:00 AM May 06, 2018 | |

ಚುನಾವಣಾ ಪ್ರಚಾರದ ಜತೆಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಮತದಾರರಿಗೆ ಹಣ, ಹೆಂಡ ಸೇರಿ ವಿವಿಧ ಆಮಿಷಗಳ ಭರಾಟೆಯೂ ಹೆಚ್ಚಾಗುತ್ತದೆ. ಆಮಿಷಕ್ಕೊಳಗಾಗಿ ಓಟು ಮಾರಿಕೊಳ್ಳುವುದು ಅನೈತಿಕ ಮತ್ತು ಅಪರಾಧ. ಪ್ರತಿಯೊಬ್ಬರೂ ಮುಕ್ತವಾಗಿ ತಮ್ಮ ಹಕ್ಕು ಚಲಾಯಿಸುವಂತಾಗಬೇಕು.

Advertisement

ಓಟಿನ ಗೌಪ್ಯತೆ, ಘನತೆ ಮತ್ತು ಅದರ ಮೌಲ್ಯ ಕಾಪಾಡಬೇಕು ಎಂಬುದು ಚುನಾವಣಾ ಆಯೋಗದ ಸದಾಶಯ. ಇದಕ್ಕೆ ಪ್ರತಿಯೊಬ್ಬ ಜಾಗೃತ ನಾಗರಿಕ ಬೆಂಬಲವಾಗಿ ನಿಲ್ಲಬೇಕು ಎನ್ನುವುದು ಆಯೋಗದ ಸದಿಚ್ಛೆ. ಈ ಹಿನ್ನೆಲೆಯಲ್ಲಿ ಆಯೋಗ “ಸಮಾಧಾನ್‌’ ಎಂಬ ಹೆಸರಿನ ಅಪ್ಲಿಕೇಷನ್‌ ಸಿದಟಛಿಪಡಿಸಿದೆ. ಇದನ್ನು ಬಳಸಿಕೊಂಡು ಚುನಾವಣಾ ಅಕ್ರಮಗಳು, ಮತದಾರರಿಗೆ ಆಮಿಷವೊಡ್ಡುವ ಸಂದರ್ಭಗಳು, ಹಣ,ಹೆಂಡ ಹಂಚಿಕೆ ಪ್ರಕರಣಗಳು, ನೀತಿ ಸಂಹಿತೆ ಉಲ್ಲಂಘನೆ, ಅಧಿಕಾರಿಗಳ ಪಕ್ಷಪಾತ ಮುಂತಾದ ಸಂಗತಿಗಳ ಬಗ್ಗೆ ವೆಬ್‌ಸೈಟ್‌, ಈ-ಮೇಲ್‌,ಇ-ಲೆಟರ್‌, ಫ್ಯಾಕ್ಸ್‌, ಎಸ್‌ಎಂಎಸ್‌, 1950 ಕಾಲ್‌ ಸೆಂಟರ್‌ ಮೂಲಕ ದೂರು ಸಲ್ಲಿಸಬಹುದು. ಸಲಹೆ ಕೊಡಲೂ ಅವಕಾಶವಿರುತ್ತದೆ. ಇಲ್ಲಿ ನೀಡುವ ದೂರುಗಳಿಗೆ 48 ಗಂಟೆಗಳಲ್ಲಿ ಪರಿಹಾರ ಸಿಗುತ್ತದೆ. ಮಾ.27ರಿಂದ ಇಲ್ಲಿವರೆಗೆ 1,209 ದೂರುಗಳು ಸಲ್ಲಿಕೆಯಾಗಿದ್ದು, 1,164 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next