Advertisement
ಪ್ರಕರಣ 12015ರ ಫೆಬ್ರವರಿ ಮೊದಲ ವಾರದಲ್ಲಿ ಅಂಬಾಗಿಲಿನ ನಾಗೇಶ್ ರಾವ್ ಅವರ ಮನೆಯ ಒಳ ನುಗ್ಗಿದ್ದ ಆರೋಪಿಗಳು ಕಪಾಟಿನಲ್ಲಿದ್ದ ಒಂದು ಲ.ರೂ. ಮೌಲ್ಯದ ಸುಮಾರು 40 ಗ್ರಾಂ. ತೂಕದ 4 ಚಿನ್ನದ ಬಳೆಗಳನ್ನು ಕಳವುಗೈದಿದ್ದರು.
2015ರ ಜನವರಿ ತಿಂಗಳ ಕೊನೆಯ ವಾರದಲ್ಲಿ ಈ ಪ್ರಕರಣ ನಡೆದಿತ್ತು. ಬೀಡಿನಗುಡ್ಡೆ ಪಿಲಿಚಾಮುಂಡಿ ರಸ್ತೆಯಲ್ಲಿರುವ ಬಿ. ಪ್ರದೀಪ್ ಕುಮಾರ್ ಯಾನೆ ಚಕ್ರಪಾಣಿ ಅವರ ಮನೆಯ ಬೀಗವನ್ನು ರಾಡಿನಿಂದ ಮುರಿದು ಕಪಾಟಿನಲ್ಲಿದ್ದ 49 ಸಾವಿರ ರೂ.ನಗದು, 34 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಆರೋಪಿಗಳು ಕಳವುಗೈದು ಮಾರಾಟ ಮಾಡಿದ್ದರು. ಆರೋಪಿಗಳಾದ ಚಿಕ್ಕಮಗಳೂರಿನ ಅನಿಲ್ ಕುಮಾರ್ ಮತ್ತು ಶಿವಮೊಗ್ಗದ ನಾಗೇಶ ಯಾನೆ ಬಸವಣ್ಣಪ್ಪ ಕಳವುಗೈದ ವಸ್ತುಗಳನ್ನು ಮಾರಾಟ ಮಾಡಿ ಹಣವನ್ನು ಖರ್ಚು ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಉಡುಪಿ ನಗರ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
Related Articles
Advertisement
ಅಭಿಯೋಜನೆಯ ಪರ ಉಡುಪಿಯ ಕಿರಿಯ ಕಾನೂನು ಅಧಿಕಾರಿ ಮಮ್ತಾಜ್, ಈಗಿನ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ವಾದಿಸಿದ್ದರು.