Advertisement

ಗಾಂಜಾ ಮಾರಾಟ : ಓರ್ವನ ಬಂಧನ

12:30 AM Mar 01, 2019 | Team Udayavani |

ಸವಣೂರು: ಬೆಳ್ಳಾರೆ ಠಾಣೆ ವ್ಯಾಪ್ತಿಯ ಮುಕ್ಕೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸವಣೂರು ಗ್ರಾಮದ ಚಾಪಳ್ಳ ಇಬ್ರಾಹಿಂ ಅವರ ಪುತ್ರ ನೌಫ‌ಲ್‌(24)ನನ್ನು ಬಂಧಿಸಿದ್ದಾರೆ. 

Advertisement

ಮುಕ್ಕೂರು ಕಾನಾವು ಕ್ರಾಸ್‌ ಬಳಿ ಗಾಂಜಾ ಮಾರುತ್ತಿದ್ದಾಗ ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಎಎಸ್‌ಐಗಳಾದ ಚಿದಾನಂದ ರೈ, ಭಾಸ್ಕರ್‌, ಬಾಲಕೃಷ್ಣ  ಅವರು ದಾಳಿ ನಡೆಸಿದ್ದರು.
  
ಬಜಾಜ್‌ ಸ್ಕೂಟರ್‌ನಲ್ಲಿ ಗಾಂಜಾವನ್ನು ಮಾರಾಟಕ್ಕೆಂದು ಸಾಗಿಸುತ್ತಿದ್ದ  ನೌಫ‌ಲ್‌ನನ್ನು ಬಂಧಿಸಿ ವಾಹನ ಸಹಿತ  500 ಗ್ರಾಂ ಗಾಂಜಾವನ್ನು  ವಶಕ್ಕೆ ಪಡೆದುಕೊಳ್ಳಲಾಗಿದೆ. ಗಾಂಜಾ ಮೌಲ್ಯ ರೂ. 6 ಸಾ.ಮತ್ತು ಸ್ಕೂಟರ್‌ ಮೌಲ್ಯ ರೂ. 5 ಸಾ.ಆಗಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next