Advertisement

Mangaluru ಗಾಂಜಾ ಮಾರಾಟ: ಓರ್ವನ ಬಂಧನ

12:09 AM Jul 20, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಸುಜಿತ್‌ ಸುಂದರ್‌ ರಾಜ್‌ನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

ಗುರುವಾರ ಸಂಜೆ ನಗರದ ಬಸವನಗುಡಿ ಕಂಡತ್ತಪಳ್ಳಿ ಮಂಡಿ ಕಡೆಗೆ ಹೋಗುವ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು. ಆರೋಪಿಯಿಂದ 11,000 ರೂ. ಮೌಲ್ಯದ 597 ಗ್ರಾಂ ಗಾಂಜಾ, 15,000 ರೂ. ಮೌಲ್ಯದ ಮೊಬೈಲ್‌ ಫೋನ್‌, ಬ್ಯಾಗ್‌ ಮತ್ತು ತೂಕ ಮಾಪನ ವಶಪಡಿಸಿ ಕೊಳ್ಳಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಜಾ ಸೇವಿಸಿದ್ದ ಇಬ್ಬರ ಬಂಧನ
ಮಣಿಪಾಲ: ಮಣ್ಣಪಳ್ಳ ಕೆರೆ ಪರಿಸರದಲ್ಲಿ ಗಾಂಜಾ ಸೇವಿಸಿದ್ದ ವಿನೋದ್‌ (22) ಹಾಗೂ ಗುರುಕಿರಣ್‌ (21) ಅವರನ್ನು ಸೆನ್‌ ಅಪರಾಧ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next