Advertisement

ಗಾಂಜಾ ಮಾರಾಟ: ವಿದ್ಯಾರ್ಥಿ ಸಹಿತ ಮೂವರ ಬಂಧನ

01:13 AM Apr 15, 2023 | Team Udayavani |

ಮಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವ ಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೆಡಿಕಲ್‌ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರು ದಕ್ಷಿಣ ಠಾಣೆ ಮತ್ತು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 5.400 ಕೆ.ಜಿ. ಗಾಂಜಾ ಮತ್ತು 4 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

Advertisement

ಮೂಲತಃ ಬೀದರ್‌ನವನಾಗಿದ್ದು ಗೋರಿಗುಡ್ಡ ಚರ್ಚ್‌ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪ್ರಜ್ವಲ್‌ ಫಿನೆಹಾಸ್‌ (26), ಮೂಲತಃ ಸಕಲೇಶಪುರ ಬೈಕರವಳ್ಳಿಯವನಾಗಿದ್ದು ಕುಲಶೇಖರದಲ್ಲಿ ವಾಸವಿದ್ದ ಧ್ರುವ ಶೆಟ್ಟಿ (19), ಕುಳಾಯಿ ನಿವಾಸಿ ಶಿವಾನಿ (22) ಬಂಧಿತ ಆರೋಪಿಗಳು.
ಪಿಎಸ್‌ಐ ಶೀತಲ್‌ ಅಲಗೂರು ಅವರಿಗೆ ಬಂದ ಮಾಹಿತಿ ಮೇರೆಗೆ ಆರೋಪಿ ಪ್ರಜ್ವಲ್‌ ಫಿನೆಹಾನ್‌ ಎಂಬಾತನನ್ನು ಬಂಧಿಸಿ ಆತ ನೀಡಿದ ಮಾಹಿತಿ ಆಧಾರದಿಂದ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಖರೀದಿ
ಪ್ರಜ್ವಲ್‌ ಫಿನೆಹಾನ್‌ ಗಾಂಜಾವನ್ನು ಮಹಾರಾಷ್ಟ್ರದಿಂದ ಖರೀದಿ ಮಾಡಿಕೊಂಡು ಬಂದು ಮಂಗಳೂರಿನಲ್ಲಿ ಆತನ ಸ್ನೇಹಿತರಾದ ಧ್ರುವ ಶೆಟ್ಟಿ ಮತ್ತು ಶಿವಾನಿ ಅವರಿಗೆ ನೀಡಿ ಅವರ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡು ತ್ತಿದ್ದರು ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

ಕಾಪು: ಮಟ್ಕಾ ದಾಳಿ; ಇಬ್ಬರು ವಶಕ್ಕೆ
ಕಾಪು: ಕಾಪುವಿನ ಪ್ರತ್ಯೇಕ ಸಾರ್ವಜನಿಕ ಪ್ರದೇಶಗಳಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ಇಬ್ಬರನ್ನು ವಶಪಡಿಸಿಕೊಂಡಿರುವ ಪೊಲೀಸರು ಬಂಧಿತರಿಂದ 7,400 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಕಾಪು ಎಸ್‌ಐ ಸುಮಾ ಬಿ. ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಾಪು ಪಡು ಗ್ರಾಮದ ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡಿಸುತ್ತಿದ್ದ ಚಂದ್ರಹಾಸ, ಕಾಪುವಿನ ಹೊಟೇಲ್‌ವೊಂದರ ಬಳಿಯಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಸುರೇಶ್‌ ಪೂಜಾರಿ ಎಂಬವರನ್ನು ಬಂಧಿಸಲಾಗಿದೆ.
ಬಂಧಿತರಿಂದ‌ ಆಟಕ್ಕೆ ಬಳಸಿದ ಪೆನ್‌, ಮಟ್ಕಾ ಚೀಟಿ ಹಾಗೂ ಆಟದಿಂದ ಸಂಗ್ರಹಿಸಿದ 3,500 ಮತ್ತು 3,900 ರೂ. ವಶಪಡಿಸಿ ಕೊಳ್ಳಲಾಗಿದ್ದು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next