Advertisement

ಉದ್ಘಾಟಿಸಿದ ನೈಟ್‌ ಕ್ಲಬ್‌ ವಿರುದ್ಧವೇ ತಿರುಗಿ ಬಿದ್ದ ಮಹಾರಾಜ್‌!

09:57 AM Apr 17, 2018 | Team Udayavani |

ಲಕ್ನೋ: ನೈಟ್‌ ಕ್ಲಬ್‌ ಉದ್ಘಾಟಿಸಿ ವಿವಾದಕ್ಕೆ ಸಿಲುಕಿದ್ದ ಬಿಜೆಪಿ  ಉರಿ ನಾಲಗೆಯ ಸಂಸದ ಸಾಕ್ಷಿ ಮಹಾರಾಜ್‌ ಅವರು ಇದೀಗ ತಾನು ಉದ್ಘಾಟಿಸಿದ ನೈಟ್‌ ಕ್ಲಬ್‌ ವಿರುದ್ಧವೇ ತಿರುಗಿ ಬಿದ್ದಿದ್ದು ತನ್ನನ್ನು ಸುಳ್ಳು ಹೇಳಿ ಕಾರ್ಯಕ್ರಮಕ್ಕೆ ಕರೆಯಲಾಗಿತ್ತು ಎಂದು ಹೊಸ ಕತೆ ಕಟ್ಟಿದ್ದಾರೆ. 

Advertisement

ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಹಾರಾಜ್‌ ‘ನನಗೆ ನೈಟ್‌ ಕ್ಲಬ್‌ ಬಗ್ಗೆ ತಿಳಿದಿರಲಿಲ್ಲ. ರೆಸ್ಟೋರೆಂಟ್‌ ಉದ್ಘಾಟನೆಗೆಂದು ಕರೆದು ಮೋಸ ಮಾಡಲಾಗಿದೆ. ನನ್ನ ಕ್ಷೇತ್ರದ ವಕೀಲರಾದ ರಜ್ಜನ್‌ ಸಿಂಗ್‌ ಚೌಹಾನ್‌ ಅವರು ಕರೆದಿದ್ದರು. ನನಗೆ ಮಾಧ್ಯಮದಲ್ಲಿ ವಿಚಾರ ನೋಡಿಯೇ  ನೈಟ್‌ ಕ್ಲಬ್‌ ವಿಚಾರ ತಿಳಿಯಿತು. ನಾನು ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿತ್ತು. ಅವಸರವಸರದಲ್ಲಿ 2-3 ನಿಮಿಷಗಳ ಒಳಗೆ ರಿಬ್ಬನ್‌ ಕತ್ತರಿಸಿ ನಾನು ತೆರಳಿದೆ’ಎಂದು ಸ್ಪಷ್ಟನೆ ನೀಡಿದ್ದಾರೆ. 

‘ನಾನು ರೆಸ್ಟೋರೆಂಟ್‌ ಪರವಾನಿಗೆ ಬಗ್ಗೆ ಕೇಳಿದಾಗ ನೀಡಿರಲಿಲ್ಲ. ಅದು ಸಂಪೂರ್ಣವಾಗಿ ಆಕ್ರಮವಾಗಿ ನಡೆಯುತ್ತಿದೆ  ಎಂದು ನನಗೆ ಗೊತ್ತಾಗಿದೆ. ಈ ಕುರಿತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. 

ಭಾನುವಾರ  ಆಲಿಗಂಜ್‌ ಪ್ರದೇಶದಲ್ಲಿನ ಸಂಕೀರ್ಣವೊಂದರಲ್ಲಿ  “ಲಟಸ್‌ ಮೀಟ್‌’ ಎನ್ನುವ ಹೆಸರಿನ ನೈಟ್‌ ಕ್ಲಬ್‌ ಉದ್ಘಾಟನೆ ಮಾಡಿದ್ದರು. ಈ ವಿಚಾರ ಸಾಮಾಜಿಕ ತಾಣಗಳು, ಮಾಧ್ಯಮಗಳಲ್ಲಿ ಪ್ರಸಾರವಾಗಿ  ಬಿಜೆಪಿಗೆ ಮುಜುಗರಕ್ಕೀಡು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next