Advertisement

ರಾಮ್‌ ರಹೀಂ ಸತ್ಯವಂತ : ಸಾಕ್ಷಿ ಮತ್ತೆ ವಿವಾದಾತ್ಮಕ ಹೇಳಿಕೆ 

03:24 PM Aug 26, 2017 | |

ಉನ್ನಾವ್‌: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸುವ, ಇಲ್ಲ ವಿವಾದ ಹುಟ್ಟು ಹಾಕುವ ಸಂಸದ ಸಾಕ್ಷಿ ಮಹಾರಾಜ್‌ ಅತ್ಯಾಚಾರ ಅಪರಾಧಿಯಾಗಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಸ್ವಘೋಷಿತ ದೇವ ಮಾನವ ರಾಮ್‌ ರಹೀಂ ಸಿಂಗ್‌ ಪರ ಬ್ಯಾಟಿಂಗ್‌ ನಡೆಸಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್‌ ‘ಕೇವಲ ಒಬ್ಬ ವ್ಯಕ್ತಿ ಅತ್ಯಾಚಾರ ಮಾಡಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಕೋಟ್ಯಾಂತರ ಜನ ಬಾಬಾ ಪರ ನಿಂತಿದ್ದಾರೆ. ಒಬ್ಬನದ್ದು ಸತ್ಯವೋ, ಕೋಟಿಗಟ್ಟಲೆ ಜನರದ್ದು ಸತ್ಯವೋ ಎಂದು ಕೋರ್ಟ್‌ ಪರಿಶೀಲನೆ ನಡೆಸಬೇಕಾಗಿದೆ. ಇದರರಲ್ಲಿ ಭಾರತೀಯ ಸಂಸ್ಕೃತಿಯನ್ನು ಮುಗಿಸುವ ಷಡ್ಯಂತ್ರ ಇದೆ’ ಎಂದು ಕೋರ್ಟ್‌ ತೀರ್ಪಿನ ವಿರುದ್ಧವೇ ಕಿಡಿ ಕಾರಿದರು. 

ಇದೇ ವೇಳೆ ‘ಜಾಮಾ ಮಸೀದಿಯ ಇಮಾಮ್‌ರನ್ನು ಏಕೆ ಕೋರ್ಟ್‌ ಕರೆಯುವುದಿಲ್ಲ. ಅವರ ವಿರುದ್ಧವೂ ಪ್ರಕರಣಗಳು ಇವೆಯಲ್ಲಾ’ ಎಂದು ಸಾಕ್ಷಿ ಪ್ರಶ್ನಿಸಿದರು. 

ಬಾಬಾ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿದೆ. ಈ ಬಗ್ಗೆ ಪಕ್ಷ ನೊಟೀಸ್‌ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next