Advertisement

ಪ್ರಶಸ್ತಿ ಮರಳಿಸಿದ ಖ್ಯಾತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌

10:36 PM Sep 02, 2022 | Team Udayavani |

ಚೆನ್ನೈ: ಚಿತ್ರದುರ್ಗದ ಮುರುಘಾ ಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ಪ್ರಸಿದ್ಧ ಪತ್ರಕರ್ತ, ರಾಮನ್‌ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪಿ.ಸಾಯಿನಾಥ್‌ ಅವರು ಮಠದಿಂದ ಸ್ವೀಕರಿಸಿದ್ದ “ಬಸವಶ್ರೀ’ ಪ್ರಶಸ್ತಿಯನ್ನು ವಾಪಸ್‌ ಮಾಡುವುದಾಗಿ ಘೋಷಿಸಿದ್ದಾರೆ.

Advertisement

“2017ರಲ್ಲಿ ಮುರುಘಾ ಮಠವು ನನಗೆ ಪ್ರಶಸ್ತಿ ಕೊಟ್ಟಿತ್ತು. ಆದರೆ ಈಗ ಆ ಮಠದ ಮಠಾಧೀಶರ ಬಗ್ಗೆ ಕೇಳಿಬಂದ ಆರೋಪದಿಂದಾಗಿ ನನಗೆ ಬೇಸರವಾಗಿದೆ. ಇದನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುತ್ತಿಲ್ಲ.

ಹಾಗಾಗಿ ನಾನು ಪ್ರಶಸ್ತಿಯನ್ನು ವಾಪಸ್‌ ಮಾಡುತ್ತಿದ್ದೇನೆ. ಪ್ರಶಸ್ತಿ ಜತೆಗೆ ಕೊಡಲಾಗಿದ್ದ 5 ಲಕ್ಷ ರೂ. ಪ್ರೋತ್ಸಾಹ ಧನವನ್ನೂ ವಾಪಸ್‌ ನೀಡುತ್ತಿದ್ದೇನೆ’ ಎಂದು ಸಾಯಿನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next