Advertisement

ದೇವೇಗೌಡರಿಂದ ಸಾಯಿಗೋಲ್ಡ್‌ ಪ್ಯಾಲೇಸ್‌ ಮಳಿಗೆ ಆರಂಭ

06:27 AM Feb 20, 2019 | Team Udayavani |

ಬೆಂಗಳೂರು: ಯಲಹಂಕ ನೆಹರು ನಗರದಲ್ಲಿ ಶ್ರೀ ಸಾಯಿಗೋಲ್ಡ್‌ ಪ್ಯಾಲೇಸ್‌ನ ನಾಲ್ಕನೇ ಮಳಿಗೆಯನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಉದ್ಘಾಟಿಸಿ, ಶುಭ ಹಾರೈಸಿದರು.

Advertisement

ಈ ಸಂದರ್ಭದಲ್ಲಿ ಮಾಲೀಕ ಡಾ. ಟಿ.ಎ. ಶರವಣ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಚಿನ್ನಾಭರಣ ಮಾರಾಟ ವಲಯದಲ್ಲಿ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಹೆಸರುವಾಸಿಯಾಗಿದ್ದು, ಗುಣಮಟ್ಟದ ಚಿನ್ನವನ್ನು ಪೂರೈಸುವಲ್ಲಿ ಹಾಗೂ ಆಕರ್ಷಕ ಕೊಡುಗೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಅದೇ ಉದ್ದೇಶದಲ್ಲಿ ಬೆಂಗಳೂರು ನಗರದ ಉತ್ತರ ಭಾಗದ ಗ್ರಾಹಕರಿಗಾಗಿ ಯಲಹಂಕ ಮಳಿಗೆಯನ್ನು ತೆರೆಯಲಾಗಿದೆ. ನೂತನ ಶಾಖೆಯಲ್ಲಿ 30 ದಿನಗಳ ಕಾಲ ದುಬೈ ಬೆಲೆಯಲ್ಲಿ ಚಿನ್ನವನ್ನು ಮಾರಾಟ ಮಾಡಲಾಗುವುದು ಎಂದರು.

ಮೇಯರ್‌ ಗಂಗಾಂಬಿಕೆ, ಶಾಸಕರಾದ ಅನಿತಾ ಕುಮಾರಸ್ವಾಮಿ, ಎಸ್‌.ಆರ್‌. ವಿಶ್ವನಾಥ್‌, ಗೌರಿ ಗದ್ದೆಯ ವಿನಯ್‌ ಗುರೂಜಿ, ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌, ಪಾಲಿಕೆ ಸದಸ್ಯ ಚಂದ್ರಮ್ಮ ಕೆಂಪೇಗೌಡ, ನಟಿ ರೂಪಿಕಾ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next