Advertisement
ಸೈದಾಪುರ: ವಿದ್ಯುತ್ ಅವಶ್ಯಕತೆ ಇರುವಷ್ಟೇ ಅಪಾಯ ಕೂಡ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಜತೆಗೆ ಸುರಕ್ಷತೆಗೆ ಒತ್ತು ನೀಡಬೇಕಾದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜನರು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿರುವ ಸನ್ನಿವೇಶ ಗ್ರಾಮದಲ್ಲಿ ಎದುರಾಗಿದೆ.
Related Articles
Advertisement
ವಿದ್ಯುತ್ ಸೋರಿಕೆ ತಡೆಗಟ್ಟುವ ತಂತಿಗಳು ನಿರುಪಯುಕ್ತವಾಗಿವೆ. ವಿದ್ಯುತ್ ಸೋರಿಕೆ ಮತ್ತು ಅಪಘಾತ ತಡೆಗಟ್ಟಲು ಪಟ್ಟಣದ ಅನೇಕ ಕಡೆ ನೂತನ ತಂತಿ ಹಾಕಲಾಗಿದೆ. ಆದರೆ ಹಾಕಿರುವ ಗುತ್ತಿಗೆದಾರರ ಕಳಪೆ ಕಾರ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವುಗಳು ನಿರುಪಯುಕ್ತವಾಗಿದೆ.ಸೈದಾಪುರದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ.
ಸ್ವಲ್ಪ ಗಾಳಿ ಬೀಸಿದರೂ ಬೆಂಕಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ ಪೊಲೀಸ್ ಕಾಲೋನಿಯಲ್ಲಿರುವ ತಂತಿಗಳು ಅನೇಕ ಬಾರಿ ಕಡಿದು ಬಿದ್ದಿವೆ. ಇದರ ಬಗ್ಗೆ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಇನ್ನೂ ಕೂಡ ಬಗೆಹರಿಸಿಲ್ಲ. ಇನ್ನು ಮುಂದಾದರು ಜೋತು ಬಿದ್ದಿರುವ ತಂತಿಗಳನ್ನು ಬಿಗಿಗೊಳಿಸಬೇಕು.ಭೀಮಣ್ಣ ಮಡಿವಾಳಕರ್
ಸ್ಥಳೀಯ ನಿವಾಸಿ ಸೈದಾಪುರ ಪೊಲೀಸ್ ಕಾಲೋನಿಗೆ ಜೆಸ್ಕಾಂ ಸಿಬ್ಬಂದಿ ಕಳುಹಿಸಿ ಅಲ್ಲಿರುವ ಸಮಸ್ಯೆ ಪರಿಹರಿಸಲು ಸೂಚಿಸುತ್ತೇನೆ. ಸಮಯಕ್ಕೆ ತಕ್ಕಂತೆ ಬೀದಿ ದೀಪಗಳನ್ನು ನಿಯಂತ್ರಿಸುವುದು ಗ್ರಾಪಂ ಜವಾಬ್ದಾರಿ. ಆದರೂ ಈ ಬಗ್ಗೆ ಗ್ರಾಪಂ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇನೆ.
ವಿಶ್ವನಾಥರೆಡ್ಡಿ
ಜೆಸ್ಕಾಂ ಎಇಇ ಯಾದಗಿರಿ