Advertisement

Badminton ವಿದಾಯ ಹೇಳಿದ ಸಾಯಿ ಪ್ರಣೀತ್‌

11:59 PM Mar 04, 2024 | Team Udayavani |

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಬಿ. ಸಾಯಿ ಪ್ರಣೀತ್‌ ಅಂತಾರಾಷ್ಟೀಯ ಬ್ಯಾಡ್ಮಿಂಟನ್‌ಗೆ ವಿದಾಯ ಘೋಷಿಸಿದರು.

Advertisement

31 ವರ್ಷದ ಹೈದರಾಬಾದ್‌ ಆಟಗಾರನಾಗಿರುವ ಸಾಯಿ ಪ್ರಣೀತ್‌ ಕಳೆದೊಂದು ದಶಕದಿಂದ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಸಕ್ರಿಯರಾಗಿದ್ದರು. 2017ರಲ್ಲಿ ಸಿಂಗಾಪುರ್‌ ಓಪನ್‌ ಪ್ರಶಸ್ತಿ ಜಯಿಸಿದ್ದು, 2019ರ ಬಾಸೆಲ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದು ಸಾಯಿ ಪ್ರಣೀತ್‌ ಅವರ ಸ್ಮರಣೀಯ ಸಾಧನೆಗಳಾಗಿವೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅವರು ಭಾರತವನ್ನು ಪ್ರತಿನಿಧಿಸಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ ಗರಿಷ್ಠ 10ನೇ ಸ್ಥಾನಕ್ಕೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next