Advertisement

ಸಾಗರ: ಯು ಕೆಜಿ ಮಕ್ಕಳಿಗೆ ಪದವಿ ಪ್ರದಾನ!

03:11 PM Apr 01, 2022 | Team Udayavani |

ಸಾಗರ: ಇಲ್ಲಿನ ವರದಹಳ್ಳಿ ರಸ್ತೆಯಲ್ಲಿರುವ ರಾಧಾಕೃಷ್ಣ ಪಬ್ಲಿಕ್ ಸ್ಕೂಲ್‌ನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಎರಡನೇ ವರ್ಷವನ್ನು ಯಶಸ್ವಿಯಾಗಿ ಮುಗಿಸಿ ಒಂದನೇ ತರಗತಿಗೆ ದಾಖಲಾಗಲು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ‘ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ’ ಕಾರ‍್ಯಕ್ರಮವನ್ನು ಆಚರಿಸಿ, ಯು ಕೆಜಿಯ ಎಲ್ಲ ಮಕ್ಕಳಿಗೂ ಕಿಂಡರ್ ಗಾರ್ಟನ್ ಪದವಿ ಪ್ರದಾನ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದ ವಿಶೀಷ್ಟ ಕಾರ್ಯಕ್ರಮ ನಡೆಯಿತು.

Advertisement

ಪುಟಾಣಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದ ನಿವೃತ್ತ ಪ್ರಾಚಾರ್ಯ ಆರ್.ಎಂ.ಬಾಪಟ್ ಮಾತನಾಡಿ, ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕಲಿಯುವ ಮತ್ತು ಹೊಸತನ್ನು ಬೇಗನೆ ಗ್ರಹಿಸುವ ಪ್ರಚಂಡ ಶಕ್ತಿ ಇದ್ದು ಅದನ್ನು ಬೆಳೆಸುವಲ್ಲಿ ಪೋಷಕರು ಜಾಗೃತರಾಗಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಕೆ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪರಮಾತ್ಮ, ವಿನೋದ ಕೃಷ್ಣಮೂರ್ತಿ, ಹಿರಿಯ ಆಂಗ್ಲ ಭಾಷಾ ಶಿಕ್ಷಕರಾದ ರವೀಂದ್ರ ಎನ್. ಸ್ವಾಮಿ ಇದ್ದರು.

ಸಂಜನಾ ಸಂಗಡಿಗರು ಪ್ರಾರ್ಥಿಸಿದರು. ಶ್ರೀಮತಿ ಸ್ವಾಗತಿಸಿದರು. ಪ್ರಾಚಾರ್ಯ ಗೋಪಾಲ್ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.  ವರ್ಷಾ ವಂದಿಸಿದರು. ಕಾವ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next