Advertisement

ಸಾಗರದಲ್ಲಿ 12 ಗಂಟೆ ವ್ಯಾಪಾರಕ್ಕೆ ಅವಕಾಶ: ಡಾ. ನಾಗರಾಜ

01:19 PM May 04, 2020 | Naveen |

ಸಾಗರ: ಸೋಮವಾರದಿಂದ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟು ನಡೆಸಲು ಯಾವುದೇ ನಿರ್ಬಂಧವಿಲ್ಲ. ಸಲೂನ್‌, ಮಾಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಸಿನಿಮಾ ಥಿಯೇಟರ್‌ ಇರುವುದಿಲ್ಲ. ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌ ನೀಡಬಹುದೇ ವಿನಃ ಜನರಿಗೆ ಹೋಟೆಲ್‌ನೊಳಗೆ ಕುಳಿತುಕೊಳ್ಳಲು ಅವಕಾಶವಿಲ್ಲ ಎಂದು ಸಹಾಯಕ ಆಯುಕ್ತ ಡಾ. ನಾಗರಾಜ್‌ ಎಲ್‌. ತಿಳಿಸಿದರು.

Advertisement

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೋವಿಡ್‌-19 ಟಾಸ್ಕ್ಫೋರ್ಸ್‌ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಗುಟ್ಕಾ ಜಗಿದು ಉಗುಳುವುದು, ಸಾಮಾನ್ಯವಾಗಿ ಉಗುಳುವುದು, ಸಿಗರೇಟ್‌ ಸೇವನೆ ಮಾಡಿದರೆ ದಂಡ ಹಾಕಲಾಗುತ್ತದೆ. ಮೊದಲ ಹಂತದಲ್ಲಿ 500 ರೂ. ನಂತರ 1000 ರೂ. ದಂಡ ಹಾಕಲಾಗುತ್ತದೆ. ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳಿಗೆ ದಂಡ ಹಾಕಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿರುವುದು, ರಸ್ತೆಯಲ್ಲಿ ತಿರುಗುವಾಗ ಮಾಸ್ಕ್ ಧರಿಸದೆ ಇದ್ದಲ್ಲಿ 100 ರೂ. ದಂಡ ವಿಧಿಸಲಾಗುತ್ತದೆ. ಜತೆಗೆ ಅನಗತ್ಯವಾಗಿ ರಸ್ತೆಯಲ್ಲಿ ವಾಹನದಲ್ಲಿ ತಿರುಗಿದರೆ ಅಂತಹವರಿಗೂ ಪೊಲೀಸ್‌ ಇಲಾಖೆ ದಂಡ ವಿಧಿಸುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಸೋಮವಾರದಿಂದ ಹೊರಜಿಲ್ಲೆಗಳಿಗೆ ಹೋಗಲು ಡಿಸಿ ಆದೇಶದನ್ವಯ ಒಂದು ದಿನದ ಪಾಸ್‌ ವಿತರಿಸಲಾಗುತ್ತದೆ. ಇಲ್ಲಿಂದ ಹೊರಜಿಲ್ಲೆಗೆ ಹೋಗಲು ಮಾತ್ರ ಪಾಸ್‌ ನೀಡುತ್ತಿದ್ದು, ಹೊರಜಿಲ್ಲೆಗೆ ಹೋದವರು ಪುನಃ ಸಾಗರಕ್ಕೆ ಬಂದರೆ, ಹೊರಗಿನ ಜಿಲ್ಲೆ, ರಾಜ್ಯದಿಂದ ಸಾಗರಕ್ಕೆ ಬಂದರೆ ಅಂತಹವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ನಾಳೆಯಿಂದ ವೈನ್‌ ಶಾಪ್‌ ಮತ್ತು ಎಂ.ಎಸ್‌.ಐ.ಎಲ್‌ ಮದ್ಯ ಮಾರಾಟ ಮಳಿಗೆ ತೆರೆಯಲು ಕೆಲವು ಕಾನೂನಿನಡಿ ಅವಕಾಶ ನೀಡಲಾಗಿದ್ದು, ಪ್ರಮುಖವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಸ್ಥಳದಲ್ಲಿ ಕುಡಿಯುವಂತೆ ಇಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶೇ. 100 ಅಧಿಕಾರಿ ನೌಕರರು ಕೆಲಸ ಮಾಡುತ್ತಾರೆ. ಆದರೆ ಖಾಸಗಿ ಕಚೇರಿ, ಕೈಗಾರಿಕೆ ಇನ್ನಿತರೆ ಕಡೆಗಳಲ್ಲಿ ಶೇ.33ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕು ಎಂದರು.

ಶಾಸಕ ಎಚ್‌.ಹಾಲಪ್ಪ ಹರತಾಳು, ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಪೌರಾಯುಕ್ತ ಎಚ್‌.ಕೆ.ನಾಗಪ್ಪ, ಡಿವೈಎಸ್‌ಪಿ ವಿನಾಯಕ್‌ ಎನ್‌. ಶೆಟ್ಟಿಗಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್‌ ಕೆ.ಎಸ್‌., ಡಾ. ವಾಸುದೇವ ಪ್ರಭು, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹಾಬಲೇಶ್ವರ ನಾಯ್ಕ, ಕಾರ್ಯನಿರ್ವಹಣಾ ಧಿಕಾರಿ ಪುಷ್ಪಾ ಎಂ. ಕಮ್ಮಾರ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next