Advertisement

ಗಾಳಿ-ಮಳೆ: ಮರ ಬಿದ್ದು ವ್ಯಕ್ತಿಗೆ ಗಾಯ

05:13 PM May 11, 2020 | Naveen |

ಸಾಗರ: ತಾಲೂಕಿನ ಹಲವು ಕಡೆಗಳಲ್ಲಿ ಭಾನುವಾರ ಭಾರೀ ಗಾಳಿ-ಮಳೆ ಸುರಿದಿದ್ದು, ವಿದ್ಯುತ್‌ ಸಂಪರ್ಕದ ಕಂಬಗಳು ಧರೆಗುರುಳಿವೆ. ಮರ ಬಿದ್ದು ವ್ಯಕ್ತಿಯೊಬ್ಬ ಗಾಯಗೊಂಡಿದ್ದಾರೆ.

Advertisement

ಪಟ್ಟಣದ ಎಸ್‌ಎನ್‌ ನಗರದಲ್ಲಿ ಹಾಗೂ ಆವಿನಹಳ್ಳಿ ರಸ್ತೆಯಲ್ಲಿ ತಲಾ 2 ವಿದ್ಯುತ್‌ ಕಂಬಗಳು ಮುರಿದಿದ್ದು, ಬಹಳಷ್ಟು ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದಿವೆ. ಎಸ್‌ಎನ್‌ ನಗರದ ರಕ್ತೇಶ್ವರಿ ದೇವಸ್ಥಾನದ ಬಳಿ ವಿದ್ಯುತ್‌ ಕಂಬವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ತೆರವುಗೊಳಿಸುವ ಕಾರ್ಯವನ್ನು ಇಲಾಖೆ ನಡೆಸುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇಲ್ಲಿನ ಆವಿನಹಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಚಿಪ್ಪಳಿಗೆ ತೆರಳುತ್ತಿದ್ದ ಹಾನಂಬಿ ರಸ್ತೆಯ ವಾಸಿ ತಾಹೀರ್‌ ಎಂಬುವವರ ಮೇಲೆ ರಸ್ತೆ ಪಕ್ಕದ ಮರ ಬಿದ್ದು, ತಲೆಗೆ ಗಂಭೀರವಾದ ಪೆಟ್ಟಾಗಿದೆ. ಸ್ಥಳೀಯರು ತಕ್ಷಣ ಅವರನ್ನು ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next