Advertisement

ಜಾತ್ರೆಯಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ : ಪೊಲೀಸರಿಂದ ಕಾರ್ಯಾಚರಣೆ

03:09 PM Apr 05, 2022 | Team Udayavani |

ಸಾಗರ : ನಗರದ ಐತಿಹಾಸಿಕ ಪ್ರಸಿದ್ಧವಾದ ಮಹಾಗಣಪತಿ ಜಾತ್ರೆಯ ರಥೋತ್ಸವದಲ್ಲಿ ದೇವರ ಪೂಜೆಗೆ ಬಂದಿದ್ದ  70 ವರ್ಷದ ವೃದ್ಧ ಮಹಿಳೆಯ ಚಿನ್ನದ ಸರ ಕಳ್ಳತನವಾದ ಘಟನೆ ಮಂಗಳವಾರ ನಡೆದಿದೆ.

Advertisement

ಗಣಪತಿ ಜಾತ್ರೆಯ ತೇರಿನ ಬಳಿ ಪ್ರಸಾದ ಸ್ವೀಕರಿಸುತ್ತಿದ್ದಾಗ ಯಾರೋ ನನ್ನ ಕುತ್ತಿಗೆಯಲ್ಲಿದ್ದ ಸರ ಅಪಹರಿಸಿದ್ದಾರೆ ಎಂದು ಸೈದೂರಿನ ಚಂದ್ರಮ್ಮ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

20 ಗ್ರಾಂ ತೂಕದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನದ ಸರ ಎಂದು ಅಂದಾಜಿಸಲಾಗಿದೆ. ಸರ ಕಳೆದುಕೊಂಡ ವೃದ್ಧ ಮಹಿಳೆ ಚಂದ್ರಮ್ಮ ಸೈದೂರಿನಿಂದ ಒಬ್ಬರೇ ಸಾಗರದ ಗಣಪತಿ ಜಾತ್ರೆಗೆ ಆಗಮಿಸಿದ್ದರು. ಪೋಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದು ಶೀಘ್ರದಲ್ಲಿ ಸರ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ವಿಟ್ಲ: ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌, ಮೂವರ ಬಂಧನ; ನಗದು, ಸಾವಿರಾರು ಮೌಲ್ಯದ ಮೊಬೈಲ್ ವಶ

Advertisement

Udayavani is now on Telegram. Click here to join our channel and stay updated with the latest news.

Next