Advertisement

ಸಾಗರ: ಪತ್ರಕರ್ತನ ಬೈಕ್ ಕಳ್ಳತನ; ಪತ್ತೆ

10:38 PM Sep 12, 2022 | Vishnudas Patil |

ಸಾಗರ: ಇಲ್ಲಿನ ಜೆಸಿ ರಸ್ತೆಯಲ್ಲಿನ ಗಾಂಧಿಮಂದಿರದ ಪಕ್ಕದ ನಗರಸಭೆ ಕಾಂಪ್ಲೆಕ್ಸ್‌ನ ಎದುರು ಭಾನುವಾರ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನವಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಕಳ್ಳತನವಾಗಿದ್ದ ದ್ವಿಚಕ್ರವಾಹನ ಸೋಮವಾರ ಆರ್‌ಪಿ ರಸ್ತೆಯಲ್ಲಿನ ಮಲ್ನಾಡ್ ಡಯಗ್ನಾಸ್ಟಿಕ್ ಸೆಂಟರ್ ಬಳಿ ಪತ್ತೆಯಾಗಿದೆ.

Advertisement

ಇಲ್ಲಿನ ವಕೀಲ ಮತ್ತು ಪತ್ರಕರ್ತ ಎಂ.ರಾಘವೇಂದ್ರ ನಗರಸಭೆ ಕಾಂಪ್ಲೆಕ್ಸ್‌ನ ಎದುರು ಭಾನುವಾರ ಸಂಜೆ ಎಂದಿನಂತೆ ದ್ವಿಚಕ್ರವಾಹನ ನಿಲ್ಲಿಸಿ, ತಮ್ಮ ಕಚೇರಿ ಕೆಲಸಕ್ಕೆ ತೆರಳಿದ್ದರು. ಕಚೇರಿ ಕೆಲಸದ ನಂತರ ರಾತ್ರಿ ಮನೆಗೆ ತೆರಳುವ ಸಂದರ್ಭದಲ್ಲಿ ನೋಡಿದಾಗ ದ್ವಿಚಕ್ರ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಭಾನುವಾರ ರಾತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸೋಮವಾರ ದ್ವಿಚಕ್ರವಾಹನ ಸೋಮವಾರ ಆರ್‌ಪಿ ರಸ್ತೆಯ ಪಕ್ಕದಲ್ಲಿರುವುದು ಪತ್ತೆಯಾಗಿದೆ. ಹ್ಯಾಂಡಲ್‌ಲಾಕ್ ಹಾಕಿದ್ದರೂ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿದ್ದ ಅಪರಿಚತರು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ತೆರಳಿದ್ದರು ಎಂದು ಭಾವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next