Advertisement

ಸಾಫಲ್ಯ ಸೇವಾ ಸಂಘ ಮುಂಬಯಿ: ವಾರ್ಷಿಕ ಸಾಫಲ್ಯ ಕ್ರೀಡಾ ಸ್ಪರ್ಧೆ-2019ಕ್ಕೆ ಚಾಲನೆ

11:58 AM May 28, 2019 | Team Udayavani |

ಮುಂಬಯಿ: ಸಮಾಜದಲ್ಲಿನ ಪ್ರತಿಯೋರ್ವ ಪ್ರತಿಭಾನ್ವಿತರನ್ನು ಗುರುತಿಸುವ ಹೊಣೆ ಸ್ವಸಮಾಜದ್ದಾಗಿದೆ. ಸಮುದಾಯದಲ್ಲಿ ಅವರನ್ನು ಪ್ರೋತ್ಸಾಹಿಸಿದಾಗ ಆ ಪ್ರತಿಭೆಗಳು ತನ್ನಿಂದತಾನೇ ಅವಕಾಶಗಳನ್ನು ಗಿಟ್ಟಿಸಿ ತಮ್ಮನ್ನು ಗುರುತಿಸಿಕೊಳ್ಳಬಹುದು. ಸಮುದಾಯದಲ್ಲಿನ ಪ್ರತಿಭಾನ್ವಿತರೆಲ್ಲರೂ ಸಮಾಜದ ಆಸ್ತಿಯಾಗಿರುತ್ತಾರೆ ಎಂದು ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಹಿರಿಯ ಸದಸ್ಯ, ಕೊಡುಗೈದಾನಿ ಕೇಶವ ಬಿ. ಪುತ್ರನ್‌ ನುಡಿದರು.

Advertisement

ಮೇ 26ರಂದು ಬೆಳಗ್ಗೆ ಕಾಂದಿವಲಿ ಪಶ್ಚಿಮದ ಪೊಯಿಸರ್‌ ಜಿಮಾVನಾದ ನೇತಾಜಿ ಸುಭಾಶ್ಚಂದ್ರ ಬೋಸ್‌ ಕ್ರಿಡಾಂಗಣ ಸಾಫಲ್ಯ ಸೇವಾ ಸಂಘವು ಆಯೋಜಿಸಿದ್ದ ಸಾಫಲ್ಯ ಕ್ರೀಡಾ ಸ್ಪರ್ಧೆ-2019ನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯನ್ನು ಸ್ಪರ್ಧೆಗಿಂತ ಪ್ರತಿಷ್ಠೆಯಾಗಿ ಸ್ವೀಕರಿಸಬೇಕು. ಸ್ಪರ್ಧೆ, ಪ್ರತಿಭಾನ್ವೇಷಣೆಗೆ ವಯೋಮಿತಿ ತಡೆಯಾಗದು. ಕ್ರೀಡಾಸ್ಫೂರ್ತಿ ಸಮಾಜಕ್ಕೆ ಕೀರ್ತಿ ತರುತ್ತದೆ. ಕ್ರೀಡೆ ಯಾವುದೇ ಆಗಲಿ ಅವರ ಆಯ್ಕೆಯ ಸ್ಪರ್ಧೆಗೆ ನಾವು ಪ್ರೋತ್ಸಾಹ ನೀಡಬೇಕು. ಸಮುದಾಯದ ಸರ್ವೋನ್ನತಿ ಒಬ್ಬರಿಂದ ಅಸಾಧ್ಯ. ಸಾಂಘಿಕವಾಗಿ ಸಮಾಜವನ್ನು ಸಂಘಟಿಸಿ ಮುನ್ನಡೆದಾಗಲೇ ಸಫಲಿಗರಾದ ನಾವು ಎಲ್ಲಾ ಕ್ಷೇತ್ರದಲ್ಲೂ ಸಫಲರಾಗಲು ಸಾಧ್ಯ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಕೃಷ್ಣ ಕುಮಾರ್‌ ಬಂಗೇರ ಅವರು ಶ್ರೀಫಲ ಹೊಡೆದು ಕ್ರೀಡೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಕ್ರೀಡೋತ್ಸವದಲ್ಲಿ ಅಪಾರ ಸಂಖ್ಯೆಯ ಸಾಫಲ್ಯ ಸಮಾಜ ಬಾಂಧವರು, ಸಂಘದ ಸದಸ್ಯರು, ಯುವಕ-ಯುವತಿಯರು, ಮಕ್ಕಳು ಭಾಗವಹಿಸಿ ಪಥಸಂಚಲನ ನಡೆಸಿದರು. ಅತಿಥಿ-ಗಣ್ಯರು ಬಣ್ಣದ ಬಲೂನ್‌ಗೊಂಚ ಲನ್ನು ಬಾನೆತ್ತರಕ್ಕೆ ಹಾರಿಸಿ ಸಾಂಕೇತಿಕವಾಗಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.

ಸಾಫಲ್ಯ ಸೇವಾ ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್‌ ಬಂಗೇರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕ್ರೀಡೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿ-ಅಭ್ಯಾಗತರಾಗಿ ರಾಷ್ಟ್ರೀಯ ಚಾಂಪಿಯನ್‌ ಕ್ರೀಡಾಪಟು, ಟೀಂ ಇಂಡಿಯಾ ಥ್ರೋಬಾಲ್‌ ತಂಡದ ತರಬೇತುದಾರ ದೀಪಕ್‌ ವಾಸುದೇವ ಕೋಟ್ಯಾನ್‌, ಸಾಫಲ್ಯ ಸಮಾಜದ ಅತ್ಲೆಟಿಕ್‌ಗಳಾದ ಶಂಕರ್‌ ಸಫಲಿಗ ಮತ್ತು ಅಶುತೋಷ್‌ ಸಾಫಲ್ಯ ಮತ್ತು ಕ್ರೀಡೋತ್ಸವದ ಪ್ರಾಯೋಜಕರಾದ ಮಲ್ಲಿಕಾ ಸದಾನಂದ ಸಫಲಿಗ ರಾಜ್‌ಯೋಗ್‌, ಸಂಘದ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಬಂಗೇರ, ಯುವ ವಿಭಾಗದ ಅಧ್ಯಕ್ಷ ರವಿಕಾಂತ್‌ ಸಫಲಿಗ, ಕ್ರೀಡಾ ಸಂಚಾಲಕ ಹೇಮಂತ್‌ ಬಿ. ಸಫಲಿಗ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಜಯರಾಮ ಸಫಲಿಗ, ಓಂಪ್ರಕಾಶ್‌ ರಾವ್‌, ಮಾಜಿ ಉಪಾಧ್ಯಕ್ಷ ವಿಠಲ್‌ ಸಫಲಿಗ, ಪ್ರೇಮಾ ಜಯರಾಮ್‌, ಸಾಫಲ್ಯ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಂಘದ ಜೊತೆ ಕೋಶಾಧಿಕಾರಿ ದಮಯಂತಿ ಸಾಲ್ಯಾನ್‌, ಮಹಿಳಾ ವಿಭಾಗದ ಉಪಾಧ್ಯಕ್ಷೆ ವಿಮಲಾ ಬಂಗೇರ, ಕಾರ್ಯದರ್ಶಿ ಕಲಾ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Advertisement

ಕ್ರೀಡಾ ಸಹ ಸಂಘಟಕರಾದ ಹರ್ಷದ್‌ ಸಫಲಿಗ, ಸಂಜನಾ ಕುಂಜತ್ತೂರು, ಕವಿತಾ ಬಂಗೇರ ಕ್ರೀಡಾ ಮೇಲ್ವಿಚಾರಕರಾದ ಪಿ. ಬಿ. ಪುತ್ರನ್‌, ಅಶೋಕ್‌ ಕುಮಾರ್‌, ಯೋಗೇಶ್‌ ಕಾಂಚನ್‌, ಮಧುಕರ್‌ ಕರ್ಕೇರ, ವಿಜಯಕುಮಾರ್‌ ಹೊಸಕಟ್ಟಿ, ಪ್ರಕಾಶ್‌ ಪುತ್ರನ್‌ ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟರು. ವಿಶೇಷ ಆಕರ್ಷಣೆಯಾಗಿ ಪುರುಷರಿಗಾಗಿ ಕ್ರಿಕೆಟ್‌ ಮತ್ತು ವಾಲಿಬಾಲ್‌ ಪಂದ್ಯಾಟ, ಮಹಿಳೆಯರಿಗಾಗಿ ಥ್ರೋಬಾಲ್‌ ಮತ್ತು ಬಾಕ್ಸ್‌ ಕ್ರಿಕೆಟ್‌ ಸ್ಪರ್ಧೆ, ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅತ್ಯಾಕರ್ಷಕ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬರ್ಡ್‌ಗಿಫ್ಟ್‌ ಆಯೋಜಿಸಿ ಕೊನೆಯಲ್ಲಿ ಲಕ್ಕಿ ಡ್ರಾ ನಡೆಸಲಾಯಿತು.

ಕು| ಅಶ್ವಿ‌ನಿ ಸಫಲಿಗ ಮತ್ತು ಕು| ಕವಿತಾ ಬಂಗೇರ ಪ್ರಾರ್ಥನೆಗೈದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅನುಸೂಯಾ ಕೆಲ್ಲಪುತ್ತಿಗೆ ಸ್ವಾಗತಿಸಿದರು. ಪ್ರತಿಭಾ ಸಫಲಿಗ ಪ್ರಸ್ತಾವನೆಗೈದು ಅತಿಥಿಗಳನ್ನು ಪರಿಚಯಿಸಿದರು. ಸಂಘದ ವಿವಿಧ ಪದಾಧಿಕಾರಿಗಳು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಿದರು. ಕು| ನಿಶಾ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಅಶ್ವಿ‌ನಿ ಸಫಲಿಗ ಮತ್ತು ದಿಶಾ ಬಂಗೇರ ಕ್ರೀಡಾ ಸಂಯೋಜನೆಗೈದರು. ಸಂಘದ ಗೌರವ ಕೋಶಾಧಿಕಾರಿ ಭಾಸ್ಕರ್‌ ಸಫಲಿಗ ವಂದಿಸಿದರು.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next