Advertisement

ಜಾರ್ಖಂಡ್ ಆಶ್ರಮದಲ್ಲಿ ಸಾಧ್ವಿ ಮೇಲೆ ನಾಲ್ವರಿಂದ ಅತ್ಯಾಚಾರ: ಓರ್ವ ಸೆರೆ

11:16 AM Sep 09, 2020 | sudhir |

ರಾಂಚಿ : ಆಶ್ರಮದಲ್ಲೇ ಸಾಧ್ವಿ ಮೇಲೆ ನಾಲ್ವರು ದುರುಳರಿಂದ ಅತ್ಯಾಚಾರ ಎಸಗಿದ ಘಟನೆ ಸೋಮವಾರ ರಾತ್ರಿ ಜಾರ್ಖಂಡ್ ನ ಗೊಡ್ಡ ಜಿಲ್ಲೆಯಲ್ಲಿ ನಡೆದಿದೆ.

Advertisement

ಈ ಘಟನೆಗೆ ಸಂಬಂಧಿಸಿ ಮುಫಾಸಿಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ನೇಮಿಸಿದೆ, ತನಿಖೆ ನಡೆಸಿದ ತಂಡ ನಾಲ್ವರು ಆರೋಪಿಗಳಲ್ಲಿ ಓರ್ವ ದೀಪಕ್ ರಾಣಾ(22)ನನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಇನ್ನು ಉಳಿದ ಮೂವರಿಗಾಗಿ ಬಲೆ ಬಿಸಿದ್ದಾರೆ.

ಗೊಡ್ಡಾ ಜಿಲ್ಲೆಯಲ್ಲಿರುವ ಆಶ್ರಮವು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು ಈ ಆಶ್ರಮದಲ್ಲಿ ಐದು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಆರು ಜನರು ಇಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ಸೋಮವಾರ ರಾತ್ರಿ ಸುಮಾರು 2.15ರ ಹೊತ್ತಿಗೆ ಆಶ್ರಮ ಪ್ರವೇಶಿಸಿದ ನಾಲ್ವರು ಮಹಿಳೆ ಮಲಗಿದ್ದ ಕೊಠಡಿಗೆ ಪ್ರವೇಶಿಸಿ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ ಈ ವೇಳೆ ಆಶ್ರಮದಲ್ಲಿದ್ದ ಉಳಿದ ಮಹಿಳೆಯರು ತಡೆಯಲು ಬಂದಾಗ ಈ ನಾಲ್ವರು ಅವರನ್ನು ಕೊಣೆಯಲ್ಲಿ ಕೂಡಿಹಾಕಿದ್ದರೆ.

ಘಟನೆಗೆ ಸಂಬಂಧಿಸಿ ಗೊಡ್ಡಾ ಪೊಲೀಸ್ ವರಿಷ್ಠಾಧಿಕಾರಿ ವೈ.ಎಸ್.ರಮೇಶ್, “ಪ್ರಕರಣದಲ್ಲಿ ವಿವರವಾದ ತನಿಖೆ ನಡೆಯುತ್ತಿದೆ. ಎಲ್ಲಾ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ವಿಶೇಷ ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ, ”ಎಂದು ಅವರು ಹೇಳಿದ್ದಾರೆ.

Advertisement

ಕೋವಿಡ್ ಲಾಕ್ ಡೌನ್ ನಿಂದಾಗಿ ಆಶ್ರಮದಲ್ಲೇ ಉಳಿದ ಸಾಧ್ವಿ :
ಸಂತ್ರಸ್ತೆ ಮೂಲತಃ ವಾರಣಾಸಿಯವರಾಗಿದ್ದು ಕಳೆದ ಫೆಬ್ರವರಿಯಲ್ಲಿ ಜಾರ್ಖಂಡ್ ನ ಆಶ್ರಮದಲ್ಲಿ ಪ್ರವಚನ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭ ದೇಶದೆಲ್ಲೆಡೆ ಕೋವಿಡ್ ಖಾಯಿಲೆಯ ಪರಿಣಾಮ ಲಾಕ್ ಡೌನ್ ಹೇರಿದ್ದರಿಂದ ಮತ್ತೆ ವಾರಣಾಸಿಗೆ ತೆರಳಲು ಸಾಧ್ಯವಾಗಿರಲಿಲ್ಲ ಹಾಗಾಗಿ ಜಾರ್ಖಂಡ್ ನ ಆಶ್ರಮದಲ್ಲೇ ಉಳಿದುಕೊಂಡಿದ್ದರು ಇದನ್ನು ಗಮನಿಸಿದ ದುರುಳರ ತಂಡ ಈ ಕೃತ್ಯ ಎಸಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next