Advertisement

ಪ್ರಾಣಿ ಕೊಲ್ಲುವುದು ವಧಾಗೃಹಗಳೇ ವಿನಾ ದೀಪಾವಳಿಯಲ್ಲ 

11:19 PM Nov 04, 2021 | Team Udayavani |

ಚೆನ್ನೈ: ಸತತ 2ನೇ ದಿನವೂ ಈಶಾ ಫೌಂಡೇ ಶನ್‌ ಮುಖ್ಯಸ್ಥ, ಸದ್ಗುರು ಜಗ್ಗಿ ವಾಸುದೇವ್‌ ಪಟಾಕಿ ನಿಷೇಧದ ವಿರುದ್ಧ ಧ್ವನಿಯೆತ್ತಿದ್ದಾರೆ.

Advertisement

ಪ್ರಾಣಿಗಳ ಸಾವಿಗೆ ಕಾರಣವಾಗುವುದು ವಧಾಗೃಹಗಳೇ ಹೊರತು ದೀಪಾವಳಿಯಲ್ಲ. ನಿಮಗೆ ನಿಜವಾಗಲೂ ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ ಪ್ರತೀ ದಿನ ಮಾಂಸ ತಿನ್ನುವುದನ್ನು ಕಡಿಮೆ ಮಾಡಿ ಎಂದು ಸದ್ಗುರು ಗುರುವಾರ ಟ್ವೀಟ್‌ ಮಾಡಿರುವ ವೀಡಿಯೋದಲ್ಲಿ ಹೇಳಿದ್ದಾರೆ.

ನೀವು ಇವತ್ತು ತಿನ್ನುವ ಹಸುವಿನ ಮಾಂಸ, ಕೋಳಿ ಮಾಂಸ ಹಿಂದೊಂದು ದಿನ ಜೀವಂತ ಪ್ರಾಣಿ, ಪಕ್ಷಿಯಾಗಿತ್ತು ಎನ್ನುವು ದನ್ನು ಮರೆಯಬೇಡಿ. ಆಹಾರಕ್ಕಾಗಿ ಪ್ರತೀ ದಿನ ವಿಶ್ವಾದ್ಯಂತ 20 ಕೋಟಿ ಪ್ರಾಣಿಗಳ ವಧೆ ಯಾಗುತ್ತದೆ. ಕನಿಷ್ಠ ಅರ್ಧದಷ್ಟು ಮಾಂಸಾಹಾರ ಕಡಿಮೆ ಮಾಡಿದರೆ, 10 ಕೋಟಿ ಪ್ರಾಣಿಗಳ ಜೀವವುಳಿಸಬಹುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next