Advertisement

ಸದ್ಗುರು ನಾನಕ್‌ ದೇವ್‌ ಪುಸ್ತಕ ಬಿಡುಗಡೆ

03:13 PM Nov 04, 2017 | Team Udayavani |

ಕಥೆಗಾರ ಎಸ್‌.ಸೀತಾರಾಮು ಅವರು ಬರೆದ “ಸದ್ಗುರು ನಾನಕ್‌ ದೇವ್‌-ಜೀವನ ಮತ್ತು ದರ್ಶನ’ ಕೃತಿಯು ಅಭಿನವ ಪ್ರಕಾಶನದಿಂದ ಬಿಡುಗಡೆಯಾಗುತ್ತಿದೆ. ವಿಮರ್ಶಕರು, ಚಿಂತಕರಾದ ಸಿ.ಎನ್‌.ರಾಮಚಂದ್ರನ್‌ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ಲೇಖಕ ಸೀತಾರಾಮು ಅವರು ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕರ ಜೀವನವನ್ನು ಅಧ್ಯಯನ ಮಾಡಿ, ಕಥನವನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ಇವರು ಕವಿ, ಕಥೆಗಾರ, ಉಪನ್ಯಾಸಕ ಹಾಗೂ ಶಿಲ್ಪಿಯಾಗಿಯೂ ಗುರುತಿಸಿಕೊಂಡಿದ್ದಾರೆ. 

ಎಲ್ಲಿ?: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕ.ಸಾ.ಪ, ಚಾಮರಾಜಪೇಟೆ
ಯಾವಾಗ?: ನವೆಂಬರ್‌ 4, ಬೆಳಗ್ಗೆ 11

Advertisement

Udayavani is now on Telegram. Click here to join our channel and stay updated with the latest news.

Next