Advertisement

ಸದಾಶಿವ ವರದಿ ಜಾರಿಗೆ ಬೃಹತ್‌ ಪ್ರತಿಭಟನೆ

05:47 PM Oct 13, 2021 | Team Udayavani |

ಚಾಮರಾಜನಗರ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿ ಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ, ಜಿಲ್ಲಾ ಬಾಬೂ ಜಗಜೀವನರಾಂ ಸಂಘಗಳ ಒಕ್ಕೂಟ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲೆಯ ಐದು ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಾದಿಗ ಸಮುದಾಯದವರು ಮೆರವಣಿಗೆ ಹೊರಟರು. ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸದಾಶಿವ ಆಯೋಗ ವರದಿ ಜಾರಿಗೆ ಅಗ್ರಹಿಸಿದರು. ಬಳಿಕ ಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತಲುಪಿ, ಮುಂಭಾಗ ಧರಣಿ ನಡೆಸಿದರು. ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್‌, ಕರ್ನಾಟಕದಲ್ಲಿ ಮಾದಿಗ ಜನಾಂಗವು ಎಲ್‌.ಜಿ. ಹಾವನೂರು ವರದಿ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ ಶೇ. 57.3 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಸುಮಾರು 30 ವರ್ಷಗಳಿಂದಲೂ ಜನಸಂಖ್ಯಾವಾರು ಒಳಮೀಸ ಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದುವರಿಗೆ ನಮ್ಮನ್ನು ಆಳಿದ ಸರ್ಕಾರಗಳು ಓಟ್‌ ಬ್ಯಾಂಕ್‌ ರಾಜಕಾರಣ ಮಾಡಿಕೊಂಡು ಬಂದಿದೆ.

ಇದನ್ನೂ ಓದಿ;- ಚಿರತೆ ಸಂಚಲನ : ಹಣಕುಣಿ ಗ್ರಾಮಕ್ಕೆ ಶಾಸಕರು, ಅರಣ್ಯ ಅಧಿಕಾರಿಗಳ ತಂಡ ದೌಡು

ಮಾದಿಗ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿವೆ ಎಂದು ದೂರಿದರು. ಮಾದಿಗ ಜನಾಂಗವು ಬಹಳ ಹಿಂದುಳಿದ ಸಮು ದಾಯವಾಗಿದ್ದು, ರಾಜಕೀಯ, ಶೈಕ್ಷಣಿಕ ಹಾಗು ಉದ್ಯೋಗದಲ್ಲಿ ಮೀಸಲಾತಿಯನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗದೆ ಹಳ್ಳಿ ಹಳ್ಳಿಗಳಲ್ಲಿ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ 36 ಮಂದಿ ಮೀಸಲಾತಿಯಿಂದ ಗೆದ್ದು ಶಾಸಕರಾದರೂ, ಮಾದಿಗ ಸಮುದಾಯದ 5 ಮಂದಿ ಮಾತ್ರ ಶಾಸಕರಾಗಲು ಸಾಧ್ಯವಾಗುತ್ತಿದೆ. ಅದೇ ಇತರೇ ಜಾತಿಗಳಿಂದ ಮೀಸಲಾತಿ ಪಡೆದ 15 ರಿಂದ 20 ಮಂದಿ ವಿಧಾನಸಭೆ ಆಯ್ಕೆಯಾಗುತ್ತಿದ್ದಾರೆ.

Advertisement

ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮು ದಾಯವರು ಆಯ್ಕೆಯಾಗಲು ಸಾಧ್ಯವಾಗುತ್ತದೆ. ಮೀಸಲಾತಿಯನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಆರ್‌.ಎಂ. ಕಾಂತರಾಜು, ಮುಖಂಡರಾದ ಅರಕಲವಾಡಿ ನಾಗೇಂದ್ರ, ಪಾಳ್ಯರಾಚಪ್ಪ, ಶಿವಕುಮಾರ್‌, ರಾಚಪ್ಪ ರಾಮಸಮುದ್ರ, ಮರಪ್ಪ, ಎಂ. ರಾಜು, ದೇಮಹಳ್ಳಿ ನಾಗರಾಜು, ಅಂಕಳ್ಳಿ ಸಿದ್ದಯ್ಯ, ರಾಜೇಶ್‌ವಕೀಲರು, ಚಿನ್ನಸ್ವಾಮಿ, ಬಾಲರಾಜು, ರಂಗಸ್ವಾಮಿ, ಚಾಮರಾಜು, ಬಿ. ಗುರುಸ್ವಾಮಿ ಜೆ. ಜಗದೀಶ್‌, ಗೋಪಾಲ. ಸೋಮು, ಕಾಮಗೆರೆ ಮದಹೇವ್‌, ಬೂದಬಾಳು ಮಹದೇವ್‌, ಕರಿಯನಪುರ ರಾಚಪ್ಪ, ಹಸಗೂಲಿ ಸಿದ್ದಯ್ಯ ಮತ್ತಿತರರು ಭಾಗವಹಿಸಿದ್ದರು. ಬಲಾಡ್ಯರಿಗೆ ಮೀಸಲಾತಿ ಪ್ರಯೋಜನ ಮಾತನಾಡಿ, ಡಾ. ಬಿ.ಆರ್‌.ಅಂಬೇಡ್ಕರ್‌ ತಳ ಮಟ್ಟದಲ್ಲಿರುವ ಎಲ್ಲರಿಗೂ ಮೀಸಲಾತಿ ಸೌಲಭ್ಯ ದೊರೆಯ ಬೇಕೆಂಬ ಆಶಯ ಹೊಂದಿದ್ದರು.

ಆದರೆ, ಈಗ ಬಲಾಡ್ಯರಿಗೆ ಮಾತ್ರ ಮೀಸಲಾತಿಯ ಪ್ರಯೋಜನ ದೊರಕುತ್ತಿದೆ. ನಿಜವಾದ ಅಸ್ಪೃಶ್ಯ ಜಾತಿಗೆ ಸೇರಿದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ತಾರತಮ್ಯವನ್ನು ಸರಿಪಡಿಸಬೇಕು. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಇಂದು ಜಿಲ್ಲಾ ಮಟ್ಟದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ರಾಜಧಾನಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಬೇಕು ಎಂದು ಬಾಬೂ ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next