Advertisement

ಚೌಡಯ್ಯ ಮೂರ್ತಿ ಅನಾವರಣಕ್ಕೆ ಅದ್ಧೂರಿ ಸಿದ್ಧತೆ

06:13 PM Mar 02, 2020 | Naveen |

ಸೇಡಂ: ಫರತಾಬಾದ ತಾಲೂಕಿನ ಹಾಗರಗುಂಡಗಿಯಲ್ಲಿ ಮಾ.8ರಂದು ನಡೆಯುವ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಕಾರ್ಯಕ್ರಮದ ಮೆರವಣಿಗೆಯಲ್ಲಿ ಉಪ ಮುಖ್ಯಮಂತ್ರಿ ಡಾ| ಅಶ್ವತ್ಥ ನಾರಾಯಣ ಅವರನ್ನು ಒಂಭತ್ತು ಕುದುರೆಗಳುಳ್ಳ ರಥದಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ತಿಳಿಸಿದರು.

Advertisement

ಫರತಾಬಾದ ತಾಲೂಕಿನ ಹಾಗರಗುಂಡಗಿಯಲ್ಲಿ ಮಾ. 8ರಂದು ನಡೆಯುವ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೋಲಿ ಸಮಾಜದವರು ಆಂತರಿಕ ದ್ವೇಷ ಬದಿಗೊತ್ತಿ ಒಗ್ಗಟ್ಟಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವಮಟ್ಟದಲ್ಲಿ ಸಮಾಜದ ಶಕ್ತಿ ತೋರಿಸಬೇಕು. ಹೀಗಾದಲ್ಲಿ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಲು ಅನುಕೂಲ ಆಗುವುದಲ್ಲದೇ, ರಾಜ್ಯದಲ್ಲಿ ಹತ್ತಾರು ಶಾಸಕರು, ಒಂದಿಬ್ಬರು ಸಚಿವರು ಅಧಿಕಾರಕ್ಕೆ ಬರಬಹುದು. ಶೈಕ್ಷಣಿಕ ಮತ್ತು ಉದ್ಯೋಗಿಕ ರಂಗದಲ್ಲಿ ಮೀಸಲಾತಿ ದೊರೆಯಲಿದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಶಪಥ ಮಾಡಲಾಗಿದೆ ಎಂದು ಹೇಳಿದರು. ನಾನು ಮತ್ತು ನನ್ನ ಪತ್ನಿ ಕೊನೆ ಉಸಿರಿರುವತನಕ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವುದಕ್ಕಾಗಿಯೇ ಹೋರಾಡುತ್ತೇವೆ ಎಂದು ಪುನರುತ್ಛರಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ ನಿಡಗುಂದಾ ಮಾತನಾಡಿ, ಕಣಿವೆ ರಾಜ್ಯದಲ್ಲಿ ತಳವಾರ ಸಮುದಾಯದವರನ್ನು ಎಸ್ಟಿಗೆ ಸೇರಿಸಲಾಗಿದೆ. ಹೀಗಾಗಿ ಕೋಲಿ ಸಮಾಜ ಬಾಂಧವರು ಮತ್ತಷ್ಟು ಶಕ್ತಿ ಪ್ರದರ್ಶಿಸುವ ಅವಶ್ಯಕತೆ ಇದೆ ಎಂದರು.

ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮರಾವ್‌ ಮುತ್ಯಾಲ, ತಾಲೂಕು ಅಧ್ಯಕ್ಷ ಶ್ರೀನಾಥ ಪಿಲ್ಲಿ, ಉದ್ಯಮಿ ಲಚ್ಚಪ್ಪ ಜಮಾದಾರ, ಮಾಜಿ ಅಧ್ಯಕ್ಷ ಭೀಮರಾವ್‌ ಅಳ್ಳೊಳ್ಳಿ, ಸೋಮಶೇಖರ ಬಿಬ್ಬಳ್ಳಿ, ಮಲ್ಲಿಕಾರ್ಜುನ ಗುಡ್ಡದ, ನಾಗಪ್ಪ ಕೊಳ್ಳಿ, ಶ್ಯಾಮಪ್ಪ ಕೋಲಿ, ವೆಂಕಟೇಶ ಬಿಲಕಲ್‌, ನಾಗೇಂದ್ರಪ್ಪ ಲಿಂಗಂಪಲ್ಲಿ, ಮಲ್ಲಿಕಾರ್ಜುನ ಮುತ್ಯಾಲ, ಹಣಮಂತಪ್ಪ, ರಾಘವೇಂದ್ರ ಮೆಕ್ಯಾನಿಕ್‌, ಮಲ್ಲಿಕಾರ್ಜುನ ಬ್ಯಾಂಡ್ಲೆ, ಪ್ರವೀಣ ಕೋಡ್ಲಾ, ಮುರುಗೇಶ ಇನ್ನಿತರರು ಇದ್ದರು.ಸಮಾಜದ ಮಾಜಿ ಕಾರ್ಯಾಧ್ಯಕ್ಷ ಶರಣಪ್ಪ ಎಳ್ಳಿ ಪ್ರಾರ್ಥಿಸಿದರು, ವೆಂಕಟೇಶ ಬಿಲಕಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next