Advertisement

ಐಸಿಸಿ ವಿರುದ್ಧ ಸಚಿನ್‌ ವಾಗ್ಧಾಳಿ

06:15 AM Jun 24, 2018 | Team Udayavani |

ಮುಂಬಯಿ: ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ ಪಂದ್ಯವೊಂದರಲ್ಲಿ ಆಸ್ಟ್ರೇಲಿಯ 242 ರನ್‌ಗಳ ಹೀನಾಯ ಸೋಲು ಕಂಡಿದ್ದನ್ನು ವಿಶ್ಲೇಷಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಪಂದ್ಯದಲ್ಲಿ 2 ಚೆಂಡುಗಳನ್ನು ಬಳಸುವುದರಿಂದಲೇ ಇಂಥ ದುರಂತಗಳು ಸಂಭವಿಸುವುದು ಎಂದಿದ್ದಾರೆ.

Advertisement

ಅಪರೂಪಕ್ಕೆಂಬಂತೆ ಐಸಿಸಿ ನಿಯಮವೊಂದರ ವಿರುದ್ಧ ಮಾತನಾಡಿದ ಅವರು, “ಒಂದೇ ಇನಿಂಗ್ಸ್‌ನಲ್ಲಿ 2 ಚೆಂಡುಗಳನ್ನು ಉಪಯೋಗಿಸುವುದರಿಂದ ಯಾವುದೇ ಚೆಂಡಿಗೆ ಹಳತಾಗಲು ಅವಕಾಶ ಇಲ್ಲದಂತಾಗಿದೆ. ಇದರಿಂದ ರಿವರ್ಸ್‌ ಸ್ವಿಂಗ್‌ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇತ್ತೀಚಿನ ಪಂದ್ಯಗಳ ಕೊನೆಯ 10 ಓವರ್‌ಗಳಲ್ಲಿ ರಿವರ್ಸ್‌ ಸ್ವಿಂಗ್‌ ನೋಡುವ ಅವಕಾಶವೇ ಸಿಗುತ್ತಿಲ್ಲ’ ಎಂದು ವಿಷಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next