Advertisement

ಕಳಪೆ ಹೆಲ್ಮೆಟ್‌ ವಿರುದ್ಧ ಕ್ರಮಕ್ಕೆ ಸಚಿನ್‌ ತೆಂಡುಲ್ಕರ್‌ ಆಗ್ರಹ

07:30 AM Mar 21, 2018 | Team Udayavani |

ಹೊಸದಿಲ್ಲಿ: ಕಳಪೆ ಹೆಲ್ಮೆಟ್‌ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಜ್ಯಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ದ್ವಿ ಚಕ್ರ ವಾಹನ ಸವಾರರ ಸುರಕ್ಷಾ ಅಭಿಯಾನದ ಪ್ರಯುಕ್ತ ಅವರು ಈ ಪತ್ರ ಬರೆದಿದ್ದಾರೆ. ಹೆಚ್ಚಿನ  ಅಪಘಾತ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ಸಾವು-ನೋವುಗಳು ಹೆಚ್ಚೆಚ್ಚು ಸಂಭವಿಸಿವೆ. 

Advertisement

ಹೀಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಗುಣಮಟ್ಟದ ಹೆಲ್ಮೆಟ್‌ ಧರಿಸಬೇಕು. ಸುರಕ್ಷತೆ ದೃಷ್ಟಿಯಿಂದ ಇದು ಮುಖ್ಯ. ಈ ಸಂಬಂಧ ನಾನು ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಕಳಪೆ ಗುಣಮಟ್ಟದ ಹೆಲ್ಮೆಟ್‌ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಐಎಸ್‌ಐ ಗುಣಮಟ್ಟದಲ್ಲಿದೆಯೇ ಎನ್ನುವುದನ್ನು ಪರೀಕ್ಷಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾನೊಬ್ಬ ಕ್ರೀಡಾಪಟುವಾಗಿ ಬಳಕೆ ಮಾಡಿರುವ ಹೆಲ್ಮೆಟ್‌ನ ಗುಣಮಟ್ಟ ದ್ವಿಚಕ್ರ ವಾಹನ ಸವಾರರು ಬಳಸುವಂತಾದರೆ ಅಪಘಾತಗಳಲ್ಲಿ ಸಾವು-ನೋವುಗಳು ಕಡಿಮೆಯಾಗಲಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next