Advertisement

ಅಂಧರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆಗಾಗಿ ಸಚಿನ್‌ ಒತ್ತಾಯ

06:30 AM Feb 08, 2018 | Team Udayavani |

ಮುಂಬೈ: ಇತ್ತೀಚೆಗೆ ಅಂಧರ ವಿಶ್ವಕಪ್‌ ಗೆದ್ದು ಬೀಗಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಮಾನ್ಯತೆ ನೀಡಬೇಕು ಎಂದು ಪತ್ರ ಮೂಲಕ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ಗೆ ಒತ್ತಾಯಿಸಿದ್ದಾರೆ.

Advertisement

ಅಲ್ಲದೆ ಮಂಡಳಿಯಿಂದ ಇತರೆ ಆಟಗಾರರಿಗೆ ನೀಡುವಂತೆ ಅಂಧ ಕ್ರಿಕೆಟಿಗರಿಗೂ ಪಿಂಚಣಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದಿದ್ದಾರೆ. ಅಂಧ ಕ್ರಿಕೆಟಿಗರಿಗೆ ಬಿಸಿಸಿಐ ಮಾನ್ಯತೆ ನೀಡಿದ್ದೇ ಆದರೆ ದೇಶದ ಕ್ರೀಡಾ ವ್ಯವಸ್ಥೆಗೆ ಹೊಸ ಅರ್ಥ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ ಅಂಧ ಕ್ರಿಕೆಟಿಗರ ಜೀವನಕ್ಕೆ ಭದ್ರತೆ ಸಿಕ್ಕಿದಂತಾಗುತ್ತದೆ. ಮತ್ತಷ್ಟು ಮಂದಿ ಕ್ರಿಕೆಟ್‌ಗೆ ಬರಲು ಆಸಕ್ತಿ ತೋರಿಸುತ್ತಾರೆ. ಈ ಕುರಿತು ಬಿಸಿಸಿಐ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next