Advertisement

Sachin Tendulkar: ಸಚಿನ್‌ ಚುನಾವಣ ಆಯೋಗದ ಪ್ರತಿನಿಧಿ

11:39 PM Aug 22, 2023 | Team Udayavani |

ಹೊಸದಿಲ್ಲಿ: ದೇಶದ ಚುನಾವಣ ಪ್ರಕ್ರಿ ಯೆಯಲ್ಲಿ ಯುವ ಜನರು ಹೆಚ್ಚಿನ ರೀತಿ ಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರನ್ನು “ರಾಷ್ಟ್ರೀಯ ಪ್ರತಿನಿಧಿ’ಯನ್ನಾಹಿ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಭಾರತದ ಚುನಾವಣ ಆಯೋಗ ಮತ್ತು ತೆಂಡುಲ್ಕರ್‌ ನಡುವೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಒಟ್ಟು ಮೂರು ವರ್ಷಗಳ ಅವಧಿಯದ್ದಾಗಿರಲಿದೆ. ತೆಂಡುಲ್ಕರ್‌ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ ಪ್ರಮಾಣ ಹೆಚ್ಚಿಸುವುದೇ ಇದರ ಉದ್ದೇಶವಾಗಿದೆ.

Advertisement

ನಗರ ಮತ್ತು ಗ್ರಾಮೀಣ ಪ್ರದೇಶದ ಯುವ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡದೇ ಇರುವಲ್ಲಿನ ಹಿಂಜರಿಕೆಯ ಅಂಶಗಳ ಪತ್ತೆ ಹಚ್ಚಲು ಪ್ರಯತ್ನಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next