Advertisement

Kerala: ಇಂದು ಶಬರಿಮಲೆ ದೇಗುಲ ಓಪನ್‌

12:02 AM Nov 16, 2023 | Team Udayavani |

ಪತ್ತನಂತಿಟ್ಟ: ಮಂಡಲ-ಮಕರವಿಳಕ್ಕು ಯಾತ್ರೆ ಆರಂಭದ ಹಿನ್ನೆಲೆಯಲ್ಲಿ ಗುರುವಾರ ಸಂಜೆ 5 ಗಂಟೆಗೆ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ಬಾಗಿಲುಗಳು ತೆರೆಯಲಿವೆ. ತೀರ್ಥಯಾತ್ರೆ ಅಂಗವಾಗಿ ದೊಡ್ಡ ಸಂಖ್ಯೆಯ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಿಸಲು ಡೈನಾಮಿಕ್‌ ಕ್ಯೂ ನಿಯಂತ್ರಣ ವ್ಯವಸ್ಥೆ ಅಳವಡಿಲಾಗಿದೆ.

Advertisement

ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ತಂಗುವ ವ್ಯವಸ್ಥೆ, ದೇಗುಲದ ಬಳಿ 132 ಶೌಚಾಲಯಗಳು, ಐಸಿಯು ಸೇರಿದಂತೆ ಎಲ್ಲ ಸೌಲಭ್ಯಗಳು ಇರುವ ಆಸ್ಪತ್ರೆ, ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಬರಿಮಲೆಗಾಗಿ ವಿಶೇಷವಾಗಿ ಕೇರಳ ರಸ್ತೆ ಸಾರಿಗೆ ನಿಗಮವು 473 ಬಸ್‌ಗಳ ಕಾರ್ಯಾಚರಣೆ ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next