Advertisement
ಶಬರಿಮಲೆ ಸುತ್ತಮುತ್ತ ವಿಧಿಸಲಾದ ನಿಷೇಧಾಜ್ಞೆ ವಾಪಸ್ ಪಡೆಯುವಂತೆ ಯುಡಿಎಫ್ ಹಾಗೂ ಬಿಜೆಪಿಯ ಕೆಲವು ನಾಯಕರು ನಿರಶನ ಆರಂಭಿಸಿದ್ದು, ಅದಕ್ಕೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಕೇರಳ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಕೋರಿ ಯುಡಿಎಫ್ ಮತ್ತು ಬಿಜೆಪಿ ಸೋಮವಾರ ಪ್ರತ್ಯೇಕ ಮೆರವಣಿಗೆಗಳನ್ನು ನಡೆಸಿದವು. ಈ ವೇಳೆ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು, ಅದು ಹಿಂಸಾರೂಪ ಪಡೆದುಕೊಂಡಿತು. ಪೊಲೀಸರ ಮೇಲೆ ಕಲ್ಲು ತೂರಾಟವೂ ನಡೆಯಿತು. ಕೊನೆಗೆ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಮಾಡಿದರು. ಅಲ್ಲದೆ, ಕೆಲವು ಪ್ರಮುಖ ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು. Advertisement
ಶಬರಿಮಲೆ ದೇಗುಲ ಪ್ರವೇಶ ವಿವಾದ: ಮತ್ತೆ ಹಿಂಸಾಚಾರ
06:00 AM Dec 11, 2018 | |
Advertisement
Udayavani is now on Telegram. Click here to join our channel and stay updated with the latest news.