Advertisement

ಶಬರಿಮಲೆ ವಿಚಾರ ಪ್ರಸ್ತಾವಿಸಿಯೇ ಸಿದ್ಧ

12:30 AM Mar 13, 2019 | |

ತಿರುವನಂತಪುರಂ: ಚುನಾವಣಾ ಪ್ರಚಾರದ ವೇಳೆ ಶಬರಿ ಮಲೆ ವಿವಾದವನ್ನು ಪ್ರಸ್ತಾವಿಸುವಂತಿಲ್ಲ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಕ್ಯಾರೇ ಎನ್ನುತ್ತಿಲ್ಲ. ಪ್ರಚಾರದಲ್ಲಿ ಈ ವಿಚಾರ ಪ್ರಸ್ತಾವಿಸಿಯೇ ಸಿದ್ಧ ಎಂದು ಎರಡೂ ಪಕ್ಷಗಳು ಪಟ್ಟು ಹಿಡಿದಿವೆ. ಶಬರಿಮಲೆ ಸಂಸ್ಕೃತಿಯ ರಕ್ಷ ಣೆಯೇ ನಮ್ಮ ಆದ್ಯತೆ. ಇದರ ಬಗ್ಗೆ ಮಾತಾಡುವುದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್‌ ಹೇಳಿದ್ದಾರೆ. ಇದೇ ವೇಳೆ, ಇಂಥ ಗಂಭೀರ ವಿಚಾರವನ್ನು ಪ್ರಸ್ತಾವಿಸದೇ ಇರಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಆಡಳಿತಾರೂಢ ಸಿಪಿಎಂ ಮಾತ್ರ ಆಯೋಗದ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next