Advertisement

ಶಬರಿಮಲೆ: ಸಿಂಘ್ವಿ ಶುಲ್ಕ 62 ಲಕ್ಷ ರೂ.

12:50 AM Aug 01, 2019 | mahesh |

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯ ಪ್ರವೇಶ ಕುರಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದಕ್ಕೆ ಕಾಂಗ್ರೆಸ್‌ ಮುಖಂಡ ಮತ್ತು ವಕೀಲ ಅಭಿಷೇಕ್‌ ಮನು ಸಿಂಘ್ವಿ 62 ಲಕ್ಷ ರೂ. ಶುಲ್ಕವನ್ನು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ವಿಧಿಸಿದ್ದಾರೆ ಎಂಬುದು ತಿಳಿದುಬಂದಿದೆ. ಆದರೆ ಶುಲ್ಕವನ್ನು ಕಡಿಮೆ ಮಾಡಿಕೊಳ್ಳುವಂತೆ ಟಿಡಿಬಿ ಆಗ್ರಹಿಸಿದೆ. ಪ್ರಕರಣದಿಂದಾಗಿ ದೇಗುಲದ ಆದಾಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಇಷ್ಟು ಮೊತ್ತವನ್ನು ಪಾವತಿ ಮಾಡಲು ಸಾಧ್ಯವಾಗದು ಎಂದು ಟಿಡಿಬಿ ಹೇಳಿದೆ ಎನ್ನಲಾಗಿದೆ.

Advertisement

ಟಿಡಿಬಿ ಅಧ್ಯಕ್ಷ ಎ ಪದಮ್‌ಕುಮಾರ್‌ ಹೇಳುವಂತೆ ಇಷ್ಟು ದೊಡ್ಡ ಮೊತ್ತವನ್ನು ಮಂಡಳಿ ಪಾವತಿಸಲು ಸಾಧ್ಯವಿಲ್ಲ. ಸಿಂಘ್ವಿಯವರನ್ನು ನಾವು ನೇಮಿಸಿರಲಿಲ್ಲ. ನಮ್ಮ ಶಿಫಾರಸಿನ ಮೇರೆಗೆ ಸರ್ಕಾರ ನೇಮಕ ಮಾಡಿತ್ತು. ಆದರೆ ಬಿಲ್ ನಮಗೆ ಕಳುಹಿಸಲಾಗಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ. ಮೂಲಗಳ ಪ್ರಕಾರ ಪ್ರಕರಣದಲ್ಲಿ ಟಿಟಿಡಿ ಪರ ವಾದಿಸಲು ಗೋಪಾಲ್ ಸುಬ್ರಮಣ್ಯನ್‌ ಮತ್ತು ಮೋಹನ್‌ ಪರಾಶರನ್‌ರನ್ನು ಶಿಫಾರಸು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next