Advertisement

ಸಿಎಂ, ಸ್ಪೀಕರ್‌ಗೆ ಎಸ್‌.ಮೂರ್ತಿ ಪತ್ರ

11:36 PM Aug 14, 2019 | Team Udayavani |

ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಕಾನೂನು ಬಾಹಿರವಾಗಿ ತಮ್ಮನ್ನು ಅಮಾನತು ಮಾಡಲಾಗಿದೆ ಎಂದು ಅಮಾನತುಗೊಂಡಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿಯವರು ನೂತನ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ವಿಧಾನಸಭೆಯ ವಿಶೇಷ ಮಂಡಳಿಯ ಅನುಮೋದನೆ ಇಲ್ಲದಿದ್ದರೂ ತಮ್ಮನ್ನು ಅಮಾನತು ಮಾಡಲಾಗಿದೆ.

Advertisement

ಇದು ಕಾನೂನು ಬಾಹಿರ. ಹೀಗಾಗಿ, ತಮ್ಮ ವಿರುದ್ಧ ಹೊರಡಿಸಿರುವ ದೋಷಾರೋಪಣಾ ಪಟ್ಟಿಯನ್ನು ರದ್ದುಪಡಿಸಬೇಕು. ಅಮಾನತು ಅವಧಿ ಆರು ತಿಂಗಳು ಮುಗಿದಿರುವುದರಿಂದ ಮತ್ತೆ ಸೇವೆಗೆ ಹಾಜರಾಗಲು ಅನುಕೂಲವಾಗುವಂತೆ ಪುನರ್‌ ನೇಮಕ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. 2016ರ ಬೆಳಗಾವಿ ಅಧಿವೇಶನಕ್ಕೆ 20.55 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, 10.75 ಲಕ್ಷ ರೂ. ವೆಚ್ಚ ಮಾಡಿ 1,79 ಕೋಟಿ ರೂ.ಉಳಿಸಿದ್ದೇನೆ.

2017 ರಲ್ಲಿ 29.39 ಕೋಟಿ ರೂ. ಬಿಡುಗೆಡೆಯಾಗಿದ್ದು 24.94 ಕೋಟಿ ರೂ. ವೆಚ್ಚ ಮಾಡಿ 4.44 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಆದರೆ, ಇದನ್ನು ಮರೆಮಾಚಿ ಅವ್ಯವಹಾರ ಆರೋಪ ಮಾಡಲಾಗಿದೆ. ಹಿಂದಿನ ಸಭಾಧ್ಯಕ್ಷರ ಆದೇಶ ಸೂಚನೆಗಳನ್ವಯವೇ ಎಲ್ಲ ವೆಚ್ಚ ಮಾಡಲಾಗಿದೆ. ಸಿಎಜಿ ಸಹ ವೆಚ್ಚಗಳಿಗೆ ಲೆಕ್ಕ ಪರಿಶೋಧನೆ ಮಾಡಿದೆಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next