Advertisement

ಸರ್ಜಿಕಲ್‌ ಸ್ಟ್ರೈಕ್‌ ವಿಷಯದಲ್ಲಿ ಕಾಂಗ್ರೆಸ್‌ ಯೂ ಟರ್ನ್: ಗುಜರಾತ್‌ ಸಿಎಂ ರೂಪಾಣಿ

09:24 AM May 06, 2019 | Team Udayavani |

ಅಹ್ಮದಾಬಾದ್‌ : ಸರ್ಜಿಕಲ್‌ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷ ಯೂ ಟರ್ನ್ ಮಾಡಿರುವುದಾಗಿ ಆರೋಪಿಸಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಈ ಹಿಂದೆ ಮೋದಿ ಸರಕಾರದಿಂದ ಸಾಕ್ಷ್ಯ ಕೇಳುತ್ತಿದ್ದ ಕಾಂಗ್ರೆಸ್‌ ಪಕ್ಷ, ಈಗ ಯುಪಿಎ ಕಾಲದಲ್ಲಿ ಆರು ಸರ್ಜಿಕಲ್‌ ಸ್ಟ್ರೈಕ್‌ ಗಳನ್ನು ನಡೆಸಿದ್ದುದಾಗಿ ಕೊಚ್ಚಿಕೊಳ್ಳುತ್ತಿದೆ ಎಂದು ಟೀಕಿಸಿದರು.

Advertisement

ಜನರಿಗೆ ಸರ್ಜಿಕಲ್‌ ಸ್ಟ್ರೈಕ್‌ ಎಂಬ ಪದ ಸಮೂಹವನ್ನು ಪರಿಚಯಿಸಿರುವ ಮೋದಿ ಸರಕಾರಕ್ಕೆ ರೂಪಾಣಿ ಧನ್ಯವಾದ ಹೇಳಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಆತನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಜೋಕ್‌ಗಳಿಗೆ ಗ್ರಾಸವಾಗಿದ್ದಾರೆ ಎಂದು ರೂಪಾಣಿ ಮೂದಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next