Advertisement

ರನ್‌ ಫಾರ್‌ ಹೆಲ್ದಿ ಲಿವಿಂಗ್‌: ಮ್ಯಾರಾಥಾನ್‌ ಓಟ

11:27 AM May 28, 2018 | Team Udayavani |

ಮಹಾನಗರ : ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಹರ್ಬಲ್‌ ಲೈಫ್‌ ನ್ಯೂಟಿಷನ್‌ ನಗರದಲ್ಲಿ ರವಿವಾರ ರನ್‌ ಫಾರ್‌ ಹೆಲ್ದಿ ಲಿವಿಂಗ್‌ ಮ್ಯಾರಥಾನ್‌ ಓಟ ನಡೆಸಿತು. 500ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು.

Advertisement

ಇದೇ ಸಂದರ್ಭದಲ್ಲಿ ದೇಶದಲ್ಲೇ ಮೊಟ್ಟಮೊದಲ ‘ಸ್ಮಾರ್ಟ್‌ ಸಿಟಿ ಕಾರ್ಯಕ್ರಮ’ ಕ್ಕೆ ಹರ್ಬಲ್‌ಲೈಫ್‌ ಕಂಟ್ರಿ ಹೆಡ್‌ ಮತ್ತು ಉಪಾಧ್ಯಕ್ಷ ಅಜಯ್‌ ಖನ್ನಾ ಚಾಲನೆ ನೀಡಿ, ಮಂಗಳೂರು, ದೇಶದ ಮೊಟ್ಟಮೊದಲ ಹರ್ಬಲ್‌ಲೈಫ್‌ ಸ್ಮಾರ್ಟ್‌ ಸಿಟಿ ಎನಿಸಿಕೊಂಡಿದೆ. ಇದು ಗ್ರಾಹಕರನ್ನು ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿಗೆ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುವ ಯೋಜನೆಯಾಗಿದ್ದು, ಇದಕ್ಕೆ ಪೂರಕವಾದ ಉತ್ಪನ್ನ, ತರಬೇತಿ ಹಾಗೂ ಕಾರ್ಯಕ್ರಮದ ಸೌಲಭ್ಯ ನಾಗರಿಕರಿಗೆ ಸಿಗಲಿದೆ ಎಂದರು.

ಅಜಯ್‌ ಖನ್ನಾ ಮಾತನಾಡಿ, ದೇಶದಾದ್ಯಂತ ಸದ್ಯದಲ್ಲೇ ಇಂಥಹ ನಾಲ್ಕು ಸ್ಮಾರ್ಟ್‌ ಸಿಟಿಗಳನ್ನು ಪರಿಚಯಿ ಸಲಾಗುವುದು. ಇದು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನೂತನ ಪ್ರಯತ್ನವಾಗಿದೆ ಎಂದರು.

ಮ್ಯಾರಾಥಾನ್‌
ನಗರದ ನೆಹರು ಕ್ರೀಡಾಂಗಣದಿಂದ ರನ್‌ ಫಾರ್‌ ಹೆಲ್ದಿ ಲಿವಿಂಗ್‌ 3 ಕಿ.ಮೀ. ಓಟ ನಡೆಯಿತು. ಹಂಪನಕಟ್ಟೆ ಸರ್ಕಲ್‌ಗೆ ತೆರಳಿ ಅಲ್ಲಿಂದ ಮತ್ತೆ ನೆಹರೂ ಮೈದಾನ ತಲುಪಿತು. ನಗರದ ಜಾಯ್‌ನೆಲ್‌ ಪಿಂಟೋ ಪ್ರಥಮ, ದಾದಾ ಖಲಂದರ್‌ ದ್ವಿತೀಯ ಹಾಗೂ ಮಾನ್‌ಸಿಂಗ್‌ ತೃತೀಯ ಬಹುಮಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next