Advertisement

ಬ್ಯಾಲೆಟ್‌ ಪೇಪರ್‌ ಸಜ್ಜುಗೊಳಿಸುವ ಪ್ರಕ್ರಿಯೆಗೆ ಚಾಲನೆ

08:31 PM Apr 14, 2019 | sudhir |

ಕಾಸರಗೋಡು: ಲೋಕಸಭೆ ಚುನಾವಣೆ ಅಂಗವಾಗಿ ಮತಯಂತ್ರಗಳಲ್ಲಿ ಬ್ಯಾಲೆಟ್‌ ಪೇಪರ್‌ ಸಜ್ಜುಗೊಳಿಸುವ ಪ್ರಕ್ರಿಯೆ ಎ.16ರಂದು ಬೆಳಗ್ಗೆ 7.30ಕ್ಕೆ ಕಾಸರಗೋಡು, ಕಾಞಂಗಾಡ್‌, ಪಯ್ಯನ್ನೂರು, ಮಾಡಾಯಿ ಪ್ರದೇಶಗಳಲ್ಲಿ ನಡೆಯಲಿದೆ.

Advertisement

ಮಂಜೇಶ್ವರ, ಕಾಸರಗೋಡು, ಉದುಮ ವಿಧಾನಸಭೆ ಕ್ಷೇತ್ರಗಳ ಮತಯಂತ್ರಗಳ ಬ್ಯಾಲೆಟ್‌ ಪೇಪರ್‌ಗಳು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಕಾಞಂಗಾಡ್‌, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ಪ್ರಕ್ರಿಯೆ ಪಡನ್ನಕ್ಕಾಡ್‌ ನೆಹರೂ ಕಾಲೇಜಿನಲ್ಲೂ, ಪಯ್ಯನ್ನೂರು ವಿಧಾನಸಭೆ ಕ್ಷೇತ್ರದ ಪ್ರಕ್ರಿಯೆ ಎ.ಕೆ.ಜಿ.ಹೈಯರ್‌ ಸೆಕೆಂಡರಿ ಶಾಲೆಯಲ್ಲಿ, ಕಲ್ಯಾಶೇರಿ ವಿಧಾನಸಭೆ ಕ್ಷೇತ್ರದ ಪ್ರಕ್ರಿಯೆ ಮಾಡಾಯಿ ಹೆಣ್ಣುಮಕ್ಕಳ ಹೈಯರ್‌ ಸೆಕೆಂಡರಿ ಸಾಲೆಯಲ್ಲಿ ನಡೆಯಲಿವೆ. ಎಲ್ಲ ಅಭ್ಯರ್ಥಿಗಳ ಪ್ರತಿನಿಧಿಗಳು ಸೂಕ್ತ ಸಮಯದಲ್ಲಿ ಹಾಜರಾಗುವಂತೆ ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next