Advertisement

ನನಗೇನು ಆಗಿಲ್ಲ, ನಾನು ಚೆನ್ನಾಗಿದ್ದೇನೆ : ಸಾವಿನ ವದಂತಿಗೆ ತೆರೆ ಎಳೆದ ಕುರಿ ಪ್ರತಾಪ್

08:44 PM May 18, 2021 | Team Udayavani |

ಬೆಂಗಳೂರು: ನಾನು ಚೆನ್ನಾಗಿದ್ದೇನೆ, ಆರಾಮಾಗಿ ಮನೆಯಲ್ಲಿ ಟಿವಿ ನೋಡುತ್ತಿದ್ದೇನೆ, ನನಗೇನು ಆಗಿಲ್ಲ ಎಂದು ಹಾಸ್ಯ ನಟ ಕುರಿ ಪ್ರತಾಪ ಹೇಳಿದ್ದಾರೆ.

Advertisement

ಇಂದು ಸಂಜೆ ಕುರಿ ಪ್ರತಾಪ್ ಅವರ ಆರೋಗ್ಯದ ಕುರಿತು ವದಂತಿಯೊಂದು ಕೇಳಿ ಬಂದಿತ್ತು. ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಬಹಳ ಗಂಭೀರವಾಗಿದೆ ಎನ್ನುವ ರೂಮರ್ ಹರಡಿತ್ತು. ಇನ್ನೂ ಹಲವರಿಗೆ ಕುರಿ ಪ್ರತಾಪ್ ಅವರು ನಿಧನರಾಗಿದ್ದಾರೆ ಎನ್ನುವ ಸುದ್ದಿ ತಲುಪಿತ್ತು. ಇದರಿಂದ ಆತಂಕಕ್ಕೊಳಗಾದ ಅವರ ಆಪ್ತರು, ಅಭಿಮಾನಿಗಳು ಪ್ರತಾಪ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ತಮ್ಮ ವಿರುದ್ದ ಹಬ್ಬಿದ್ದ ವದಂತಿಗೆ ತಾವೇ ತೆರೆ ಎಳೆಯುವ ನಿಟ್ಟಿನಲ್ಲಿ ಫೇಸ್ ಬುಕ್ ಲೈವ್ ಬಂದ ಕುರಿ ಪ್ರತಾಪ್, ನಾನು ಆರೋಗ್ಯವಾಗಿದ್ದೇನೆ, ಚೆನ್ನಾಗಿದ್ದೇನೆ, ಮನೆಯಲ್ಲಿ ಟಿವಿ ನೋಡುತ್ತಿದ್ದೇನೆ. ಯಾರೋ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನನ್ನ ಆಪ್ತರು ಕರೆ ಮಾಡುತ್ತಿದ್ದಾರೆ. ಸೃಜನ್ ಲೋಕೇಶ್ ಅವರು ಫೋನ್ ಮಾಡಿ ಆರೋಗ್ಯ ವಿಚಾರಿಸಿದರು. ಸ್ನೇಹಿತರ ಸಲಹೆ ಮೂಲಕ ಫೇಸ್ ಬುಕ್ ಲೈವ್ ಬಂದು  ವದಂತಿಗೆ ತೆರೆ ಎಳೆಯುತ್ತಿದ್ದೇನೆ ಎಂದು ತಿಳಿಸಿದರು. ಯಾರೂ ಕೂಡ ವದಂತಿಗೆ ಕಿವಿಗೊಡಬೇಡಿ, ಎಲ್ಲರೂ ಮನೆಯಲ್ಲಿ ಅರಾಮಾಗಿ ಇರಿ ಎಂದು ಮನವಿ ಮಾಡಿಕೊಂಡರು.

ಇನ್ನು ಕೆಲವು ದಿನಗಳ ಹಿಂದೆ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆಯೂ ಇಂತಹದ್ದೇ ವದಂತಿ ಹಬ್ಬಿತ್ತು. ಆಮೇಲೆ ದೊಡ್ಡಣ್ಣ ಅವರು ಸಹ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದರು. ಸಾವಿನ ಬಗ್ಗೆ ವಂದತಿ ಹಬ್ಬಿಸುವವರ ವಿರುದ್ಧ ಆಕ್ರೋಶವೂ ಹೊರಹಾಕಿದ್ದರು.ಅದೇ ರೀತಿ ಶಕ್ತಿಮಾನ ಧಾರಾವಾಹಿ ಖ್ಯಾತಿಯ ಮುಕೇಶ್ ಖನ್ನಾ ಅವರ ಕುರಿತು ಹೀಗೆ ವದಂತಿ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next