Advertisement

ಕೈದಿಗಳ ದಾಂಧಲೆ: ಅಧಿಕಾರಿಗಳಿಗೆ ಗಾಯ

03:45 AM Mar 27, 2017 | |

ಫ‌ರೂಕಾಬಾದ್‌: ಉತ್ತರ ಪ್ರದೇಶದ ಫ‌ರೂಕಾಬಾದ್‌ ಜಿಲ್ಲಾ ಕಾರಾಗೃಹದಲ್ಲಿ ಭಾರಿ ಮಾರಾಮಾರಿ ಉಂಟಾಗಿದೆ. ಈ ಘಟನೆಯಲ್ಲಿ ಪ್ರಭಾರ ಜಿಲ್ಲಾ ದಂಡಾಧಿಕಾರಿ, ಜೈಲು ಸೂಪರಿಟೆಂ ಡೆಂಟ್‌ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ ಜೈಲಲ್ಲಿ ನೀಡಲಾಗಿರುವ ಆಹಾರದ ಗುಣಮಟ್ಟ ಚೆನ್ನಾಗಿ ಇಲ್ಲದೇ ಇದ್ದುದರಿಂದ ಕ್ರುದ್ಧರಾದರು. ಕಾರಾಗೃಹದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಕೈದಿಗಳ ಆರೋಗ್ಯ ಪದೆ ಪದೆ ಹದಗೆಡುತ್ತಿದೆ. ಈ ಸಮಸ್ಯೆ ಬಗೆಹರಿಸಬೇಕೆಂದು ಬ್ಯಾರೆಕ್‌ಗಳಿಂದ ಹೊರಬಂದು ಪ್ರತಿಭಟಿಸಲಾರಂಭಿಸಿದರು.

Advertisement

ಒಂದು ಹಂತದಲ್ಲಿ ಪ್ರತಿಭಟನೆ ಕೈಮೀರಿ ಹೋಗಿ, ಕೈದಿಗಳು ಪೊಲೀಸರತ್ತ ಇಟ್ಟಿಗೆ ಎಸೆಯಲಾರಂಭಿಸಿದರು. ಸುದ್ದಿ ತಿಳಿದು ಪ್ರಭಾರ ಜಿಲ್ಲಾ ದಂಡಾಧಿಕಾರಿ ಎನ್‌.ಪಿ.ಪಾಂಡೆ ಮತ್ತು ಜೈಲ್‌ ಸೂಪರಿಂಟೆಂಡೆಂಟ್‌ ರಾಕೇಶ್‌ ಕುಮಾರ್‌ ಸ್ಥಳಕ್ಕೆ ಧಾವಿಸಿದರು. ಅವರೂ ಕೂಡ ಅಧಿಕಾರಿಗಳ ಜತೆ ಸೇರಿ ಕೈದಿಗಳನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ಅದು ಕೈಗೂಡಲಿಲ್ಲ. ಈ ಹಂತದಲ್ಲಿ ಗುಂಪಿನಿಂದ ಎಸೆದ ಇಟ್ಟಿಗೆ ಇಬ್ಬರಿಗೂ ತಗುಲಿ ಗಾಯಗಳಾದವು. ಸೆರೆಮನೆ ವಾಸಿಗಳೂ ಜೈಲಿನ ಟೆರೇಸ್‌ ಮೇಲೇರಿ ಕೈಗೆ ಸಿಕ್ಕ ವಸ್ತುಗಳನ್ನೆತ್ತಿಕೊಂಡು ಅಧಿಕಾರಿಗಳು, ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಎಸೆದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next