Advertisement

ವೇತನಕ್ಕಾಗಿ ಆರ್ ಟಿಪಿಎಸ್ ಚಿಮಣಿ ಏರಿ ಕಾರ್ಮಿಕನ ಪ್ರತಿಭಟನೆ

12:34 PM Oct 17, 2022 | Team Udayavani |

ರಾಯಚೂರು: ಕಳೆದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ವೇತನ, ಸೌಲಭ್ಯಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಕ್ರಮ ಖಂಡಿಸಿ ಆರ್ ಟಿಪಿಎಸ್ ಕಾರ್ಮಿಕ ಕೇಂದ್ರದ ಚಿಮಣಿ ಏರಿ ಪ್ರತಿಭಟನೆ ನಡೆಸುತ್ತಿದ್ದಾನೆ.

Advertisement

ಸುಮಾರು ಎಂಟು ನಿಮಿಷಗಳ ವೀಡಿಯೊ ಮಾಡಿ ನೋವು ತೋಡಿಕೊಂಡಿರುವ ಕಾರ್ಮಿಕ, ಎಲ್ಲ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿದ್ದಾನೆ. ಮಿಲ್ ಮೆಂಟೆನೇನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಒಮ್ಮೆ ನಮ್ಮ ಕಷ್ಟವನ್ನು ಕಣ್ಣಾರೆ ನೋಡಿ. ಸರ್ಕಾರಿ ನೌಕರರು, ಗುತ್ತಿಗೆ ಕಾರ್ಮಿಕರು ಒಂದೆ ಕಡೆ ಕೆಲಸ ಮಾಡಿದರೂ ಸೌಲಭ್ಯಗಳಲ್ಲಿ ಮಾತ್ರ ಅಜಗಜಾಂತರವಿದೆ. ಕೆಪಿಸಿ ಎಂಡಿಗೆ ಸಮಸ್ಯೆ ಹೇಳಿಕೊಂಡಿದ್ದಕ್ಕೆ ಗುತ್ತಿಗೆ ಸಂಸ್ಥೆ ನನಗೆ ಕಿರುಕುಳ ಕೊಡುತ್ತಿದೆ. ನಮ್ಮ ಹಕ್ಕು ಕೇಳಲು ಸ್ವಾತಂತ್ರ್ಯ ಇಲ್ಲದಾಗಿದೆ. ಗುತ್ತಿಗೆ ಕೊಡುವಾಗ ಎಚ್ಚರಿಕೆ ವಹಿಸಿ ಸಂಸ್ಥೆ ಮೇಲೆ ನಿಗಾ ವಹಿಸಿದರೆ ನಮಗೆ ಈ ಗತಿ ಬರುತ್ತಿರಲಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಚಿಮಣಿ ಏರಿ ಕುಳಿತಿದ್ದಾನೆ.

ಇದನ್ನೂ ಓದಿ:ಮುಂಬೈ ರೈಲ್ವೇ ಪ್ಲಾಟ್‌ಫಾರ್ಮ್‌ ಪ್ರವೇಶಿಸಿದ ಆಟೋ ರಿಕ್ಷಾ… ಮುಂದೇನಾಯ್ತು

ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಮತ್ತೊಂದೆಡೆ ಗುತ್ತಿಗೆ ಕಾರ್ಮಿಕರು ಹೋರಾಟ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next